ಬಿಂದು ಸಿಂಧು

Author : ರಾಧಾಕೃಷ್ಣ ಎಸ್. ಭಡ್ತಿ

Pages 288

₹ 100.00




Year of Publication: 2012
Published by: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
Address: ಹುಬ್ಬಳ್ಳಿ, ಕರ್ನಾಟಕ- 580020
Phone: 09448110034

Synopsys

ಲೇಖಕ ರಾಧಾಕೃಷ್ಣ ಭಡ್ತಿ ಅವರ ಕೃತಿ ʻಬಿಂದು ಸಿಂಧುʼ. ಈ ಪುಸ್ತಕದಲ್ಲಿ ಇವರು ಪೋಲಾಗುತ್ತಿರುವ ನೀರು ಹಾಗೂ ಸಂರಕ್ಷಿಸದೆ ಪೋಲು ಮಾಡಿದ ನೀರು ನಮ್ಮನ್ನು ಕರಾಳ ಭವಿಷ್ಯದೆಡೆಗೆ ನಡೆಸೀತು ಎಂದು ಎಚ್ಚರಿಸುತ್ತಾರೆ. ಹಾಗೆಯೇ, ವಾಸಸ್ಥಳದ ಸುತ್ತಲಿನ ನೀರಿನ ಓಡಾಟ ಗುರುತಿಸಿಕೊಂಡಲ್ಲಿ ಮುಂದಿನ ಬದುಕು ಅರ್ಧ ನಿರಾಳ ಎನ್ನುತ್ತಾರೆ ಲೇಖಕರು. ಹಾಗಾಗಿ ಉಪಯೋಗಕ್ಕಿಂತಲೂ ಅಧಿಕ ನೀರನ್ನು ಬಳಸದೆ ನೀರಿನ ಸಂರಕ್ಷಣೆಯನ್ನು ಮಾಡಬೇಕಾದ ಅವಶ್ಯಕತೆಯ ಬಗ್ಗೆ ನಾವಿಲ್ಲಿ ಓದಬಹುದಾಗಿದೆ..

About the Author

ರಾಧಾಕೃಷ್ಣ ಎಸ್. ಭಡ್ತಿ
(15 February 1971)

ಪತ್ರಕರ್ತ- ಅಂಕಣಕಾರ ರಾಧಾಕೃಷ್ಣ ಎಸ್. ಭಡ್ತಿ ಅವರು ನೀರು ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವಿರತವಾಗಿ ಬರೆಯುತ್ತಿರುವ ಲೇಖಕ. ಅವರ ಬಹುತೇಕ ಬರೆಹಗಳು ನೀರಿಗೆ ಸಂಬಂಧಿಸಿದವುಗಳಾಗಿರುವುದು ವಿಶೇಷ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರು ಸಂಗ್ರಹದ ಪಾರಂಪರಿಕ ವಿಧಾನಗಳನ್ನು ಅಂಕಣಗಳನ್ನು ಬರೆದು ಪ್ರಕಟಿಸಿರುವ ಭಡ್ತಿ ಅವರು ಸದ್ಯ ’ಹಸಿರುವಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ನೀರನ್ನು ಕುರಿತ ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ. ...

READ MORE

Related Books