ಅಮೃತಧಾರೆ

Author : ರಾಧಾಕೃಷ್ಣ ಎಸ್. ಭಡ್ತಿ

Pages 285

₹ 120.00




Year of Publication: 2012
Published by: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
Address: ಹುಬ್ಬಳ್ಳಿ, ಕರ್ನಾಟಕ- 580020
Phone: 09448110034

Synopsys

ಲೇಖಕ ರಾಧಾಕೃಷ್ಣ ಎಸ್. ಭಡ್ತಿ ಅವರ ಲೇಖನಗಳ ಸಂಕಲನ ʻಅಮೃತಧಾರೆʼ. ಪುಸ್ತಕವು ಕಲುಷಿತವಾದ ನದಿಗಳು ಹಾಗೂ ಅದನ್ನು ಸಂಸ್ಕರಿಸದಿರುವ ಪರಿಣಾಮದ ಬಗ್ಗೆ ಎಚ್ಚರಿಸುತ್ತದೆ. ನದಿ ವಿಷಮಯವಾಗಿದೆ. ಈ ನೀರಿನಲ್ಲಿ ಸಲ್ಫರ್‌ ಹಾಗೂ ಮೆಟಲ್‌ನ ಮಿಶ್ರಣದಿಂದ ʻಆರ್ಸೆನಿಕ್ʼ‌ ಎನ್ನುವ ಮಾರಕ ವಿಷವೊಂದು ರೂಪುಗೊಳ್ಳುತ್ತದೆ. ಅದನ್ನು ಸುತ್ತಲಿನ ಜಮೀನುಗಳಿಗೆ ಉಪಯೋಗಿಸುವುದರಿಂದ ಅಲ್ಲಿ ಗರಿಕೆಯೂ ಬೆಳೆಯದು. ಜೊತೆಗೆ ಮನೆಯೊಳಗಿನ ಉಪಯೋಗಕ್ಕೂ ಇದು ಮಾರಕವಾಗಿದೆ. ಭಾರತ ಸೇರಿ ನೇಪಾಳ, ಬಾಂಗ್ಲಾದೇಶಗಳಲ್ಲಿ ನದಿ ನೀರಿನ ಬಳಕೆಯಿಂದ ಸಹಸ್ರಾರು ಜನರು ಸಾವಿಗೀಡಾಗಿರುವುದು ಈ ಕಾರಣದಿಂದಲೇ. ಇನ್ನು, ಭೂಮಿಯನ್ನು ಯಂತ್ರಗಳ ಮೂಲಕ ಆಳದವರೆಗೆ ಉಳುಮೆಮಾಡಿ ಭೂ ರಂಧ್ರಗಳು ಮುಚ್ಚಿಹೋದ ಪರಿಣಾಮ ಮಣ್ಣಿನಲ್ಲಿ ಪಿಎಚ್‌ ಅಂಶ ತೀವ್ರವಾಗಿ ಇಳಿಕೆಯಾಗುತ್ತಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತವಾಗಿ ಅಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಹಾಗಾಗಿ ನದಿನೀರನ್ನು ಸಂರಕ್ಷಿಸುವುದು ತೀರಾ ಅಗತ್ಯದ ವಿಚಾರ ಎನ್ನುತ್ತಾರೆ ರಾಧಾಕೃಷ್ಣ ಅವರು.

About the Author

ರಾಧಾಕೃಷ್ಣ ಎಸ್. ಭಡ್ತಿ
(15 February 1971)

ಪತ್ರಕರ್ತ- ಅಂಕಣಕಾರ ರಾಧಾಕೃಷ್ಣ ಎಸ್. ಭಡ್ತಿ ಅವರು ನೀರು ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವಿರತವಾಗಿ ಬರೆಯುತ್ತಿರುವ ಲೇಖಕ. ಅವರ ಬಹುತೇಕ ಬರೆಹಗಳು ನೀರಿಗೆ ಸಂಬಂಧಿಸಿದವುಗಳಾಗಿರುವುದು ವಿಶೇಷ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರು ಸಂಗ್ರಹದ ಪಾರಂಪರಿಕ ವಿಧಾನಗಳನ್ನು ಅಂಕಣಗಳನ್ನು ಬರೆದು ಪ್ರಕಟಿಸಿರುವ ಭಡ್ತಿ ಅವರು ಸದ್ಯ ’ಹಸಿರುವಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ನೀರನ್ನು ಕುರಿತ ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ. ...

READ MORE

Related Books