About the Author

ರಂಗಭೂಮಿಯ ನಟ, ನಿರ್ದೇಶಕ, ನಾಟಕಕಾರ ರಾಜೇಂದ್ರ ಕಾರಂತ್, 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು  ರಚಿಸಿದ್ದಾರೆ. 1500ಕ್ಕೂ ಹೆಚ್ಚು ರಂಗ ಪ್ರಯೋಗಗಳ ರೂವಾರಿ, ನಾಟಕ ಸ್ಪರ್ಧೆಗಳಲ್ಲಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ಹುಟ್ಟಿದ್ದು ಕುಂದಾಪುರದ ಕೋಣಿ ಗ್ರಾಮದಲ್ಲಿ. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. 

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ನಂತರ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಇವರ ಮೂರು ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ರೇಡಿಯೋ, ಟಿವಿ, ಚಲನಚಿತ್ರ ಮಾಧ್ಯಮಗಳಲ್ಲೂ ಸಾಕಷ್ಟು ಹೆಸರು ಮಾಡಿರುವ ಕಾರಂತರಿಗೆ 2008ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯನ್ನು ರಂಗಭೂಮಿಯ ರಸಕಾವ್ಯವನ್ನಾಗಿಸಿ ಅಳವಡಿಸಿದ್ದು ಇದೇ ಕಾರಂತರು. ನಮ್ಮ ನಿಮ್ಮೊಳಗೊಬ್ಬ, ಮರಣ ಮೃದಂಗ ಮತ್ತು ಪೊಲೀಸ್, ತಂತಿ, ದೋಣಿ, ಸಂಜೆಜಾಡು ಇವರ ಪ್ರಮುಖ ನಾಟಕ ಕೃತಿಗಳು.

ರಾಜೇಂದ್ರ ಕಾರಂತ