About the Author

ಲೇಖಕ -ಪತ್ರಕರ್ತ ರಾಜು ಮಳವಳ್ಳಿ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿದ್ದಾರೆ. ‘ಕನ್ನಡ ಸಿರಿ ಪುಂಡಲೀಕ ಹಾಲಂಬಿ’ ಎಂಬುದು ಇವರ ಕೃತಿ. 

ಅಂದದೂರು (ಬೆಂಗಳೂರು ನಗರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ಕೆಂಪಾಂಬುಧಿ (ಬೆಂಗಳೂರು ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ನವರತ್ನ ಕನ್ನಡ ಚಿಂತನೆ (ಸಮ್ಮೇಳನಾಧ್ಯಕ್ಷರ ಭಾಷಣಗಳ ಸಂಕಲನ), ಅಂಗೈಯಲ್ಲಿ ಬೆಂಗಳೂರು (ಶ್ರೀ ರಾ.ನಂ.ಚಂದ್ರಶೇಖರ್ ಅವರೊಡಗೂಡಿ) ಕೃತಿಗಳನ್ನು ಸಂಪಾದಿಸಿದ್ದಾರೆ. 

ರಾಜು ಮಳವಳ್ಳಿ