About the Author

 ವಿದ್ವಾನ್ ರಮಾನಾಥ ಕೋಟೆಕಾರ್ ಅವರು ಕನ್ನಡ ಎಂ.ಎ. ಮತ್ತು ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ವಿದ್ವಾಂಸರು. ಅವರು ಸ್ವಂತ ಉದ್ಯಮ ನಡೆಸುತ್ತಿರುವ ಸ್ವಾವಲಂಬಿ. ಅವರ ಪ್ರವೃತ್ತಿ ಸಾಹಿತ್ಯ ಮತ್ತು ಸಂಶೋಧನೆ. 'ತುಳುನಾಡಿನ ಬಿಲ್ಲವರು' ಮತ್ತು 'ಬಿಲ್ಲವರು ಮತ್ತು ಬಾಸೆಲ್ ಮಿಷನ್' ಎಂಬ ಮಹತ್ವದ ಸಂಶೋಧನಾತ್ಮಕ ಕೃತಿ ಸಹಿತ ಹಲವು ಉಪಯುಕ್ತ ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ತುಳುನಾಡಿನ ಭೂತಾರಾಧನೆ, ಚರಿತ್ರೆ, ಸಂಪ್ರದಾಯ, ಗುತ್ತು ಮನೆತನಗಳು, ಬಿಲ್ಲವ ಸಮಾಜ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಆಸಕ್ತಿಯಿರುವ ರಮಾನಾಥ್ ಕೋಟೆಕಾರ್ ಅವುಗಳ ಅಧ್ಯಯನಕ್ಕಾಗಿ ಕ್ಷೇತ್ರಕಾರ್ಯ ಹಾಗೂ ಗ್ರಂಥಾಧ್ಯಯನ ನಡೆಸಿ ಉಪಯುಕ್ತ ಬರಹ ನೀಡುತ್ತಿದ್ದಾರೆ.

ರಮಾನಾಥ್‌ ಕೋಟೆಕಾರ್