ಕೆ. ದೂಮಪ್ಪ

Author : ರಮಾನಾಥ್‌ ಕೋಟೆಕಾರ್

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 243ನೇ ಪುಸ್ತಕ. ಶಾಶ್ವತ ಕೀರ್ತಿಯ ಶಾಸಕ ಕೆ. ದೂಮಪ್ಪ ಅವರು ಬಿಲ್ಲವ ಸಮಾಜದಲ್ಲಿ ಮೊದಲು ಪದವಿ ಪಡೆದವರಲ್ಲಿ ಒಬ್ಬರಾಗಿದ್ದರು. ಅಂದಿನ ಮದರಾಸ್ ಸರಕಾರದ ಮೀನುಗಾರಿಕಾ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಮತ್ಸೋದ್ಯಮದ ಬೆಳವಣಿಗೆಗೆ ಶ್ರಮಿಸಿದರು. ಜಿಲ್ಲೆಯ ಫಿಶರೀಸ್‌ ಶಾಲೆಗಳ ಸ್ಥಾಪನೆ, ಉಸ್ತುವಾರಿಯಲ್ಲಿ ತೊಡಗಿಕೊಂಡ ವಿದ್ಯಾಪ್ರೇಮಿ ಅವರಾಗಿದ್ದರು. ನಿವೃತ್ತರಾದ ಬಳಿಕ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಭಕ್ತರಾಗಿ ಅವಿಸ್ಮರಣೀಯ ಸಾಧನೆ ಮಾಡಿರುವ ಕೆ.(ಕಂಕನಾಡಿ) ದೂಮಪ್ಪ ಅವರದು ಮಾದರಿ ವ್ಯಕ್ತಿತ್ವ, ಅವರು ಗಾಂಧಿವಾದಿ, ಸದಾ ಶ್ವೇತ ವಸ್ತ್ರಧಾರಿ, ಬಡವರ ಪಕ್ಷಪಾತಿ, ಪರೋಪಕಾರಿ, ಶ್ರೀಮಂತರು-ಬಡವರು, ದೊಡ್ಡವರು-ಸಣ್ಣವರು ಎಂಬ ಭೇದ ಭಾವ ಮಾಡದೆ ಎಲ್ಲರಿಗೂ ಸಹಾಯ ಒದಗಿಸುತ್ತಿದ್ದವರು. ಅವರ ಬದುಕು-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ರಮಾನಾಥ್‌ ಕೋಟೆಕಾರ್

 ವಿದ್ವಾನ್ ರಮಾನಾಥ ಕೋಟೆಕಾರ್ ಅವರು ಕನ್ನಡ ಎಂ.ಎ. ಮತ್ತು ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ವಿದ್ವಾಂಸರು. ಅವರು ಸ್ವಂತ ಉದ್ಯಮ ನಡೆಸುತ್ತಿರುವ ಸ್ವಾವಲಂಬಿ. ಅವರ ಪ್ರವೃತ್ತಿ ಸಾಹಿತ್ಯ ಮತ್ತು ಸಂಶೋಧನೆ. 'ತುಳುನಾಡಿನ ಬಿಲ್ಲವರು' ಮತ್ತು 'ಬಿಲ್ಲವರು ಮತ್ತು ಬಾಸೆಲ್ ಮಿಷನ್' ಎಂಬ ಮಹತ್ವದ ಸಂಶೋಧನಾತ್ಮಕ ಕೃತಿ ಸಹಿತ ಹಲವು ಉಪಯುಕ್ತ ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ತುಳುನಾಡಿನ ಭೂತಾರಾಧನೆ, ಚರಿತ್ರೆ, ಸಂಪ್ರದಾಯ, ಗುತ್ತು ಮನೆತನಗಳು, ಬಿಲ್ಲವ ಸಮಾಜ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಆಸಕ್ತಿಯಿರುವ ರಮಾನಾಥ್ ಕೋಟೆಕಾರ್ ಅವುಗಳ ಅಧ್ಯಯನಕ್ಕಾಗಿ ಕ್ಷೇತ್ರಕಾರ್ಯ ಹಾಗೂ ಗ್ರಂಥಾಧ್ಯಯನ ...

READ MORE

Related Books