About the Author

ರೇಚಂಬಳ್ಳಿ ದುಂಡಮಾದಯ್ಯ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ರೇಚಂಬಳ್ಳಿ ಗ್ರಾಮ. ತಂದೆ ತೆಂಕಯ್ಯ ತಾಯಿ ಮಾದಮ್ಮ. ಪ್ರಸ್ತುತ ಚಾಮರಾಜನಗರದಲ್ಲಿ ನೆಲೆಸಿದ್ದಾರೆ. ಕಾಲೇಜು ದಿನಗಳಿಂದಲೆ ಸಾಹಿತ್ಯಾಭಿರುಚಿಯನ್ನು ಹೊಂದಿದ ಅವರು ಪಿಯುಸಿ ಓದುವಾಗ "ನೆನಪಿನ ದೋಣಿ" ಯೆಂಬ ಕಿರು ಕಾದಂಬರಿಯನ್ನು ರಚಿಸಿದರು. ಪತ್ರಿಕೆಗಳಿಗೆ ಕತೆ ಕವನ ಅಂಕಣಬರಹ ಚುಟುಕುಗಳನ್ನು ಬರೆಯುವುದು ಅವರ ಹವ್ಯಾಸವಾಗಿದೆ. ವೃತ್ತಿಯಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ಆಗಿರುವ ಅವರ ‘ಚುಟುಕು - ಸ್ಪಂದನ’, ‘ಸಂಯೋಗ’, ‘ಕೊಟ್ಟೂರೇಗೌಡ ಮತ್ತು ಆತನ ಕತೆಗಳು’  ಕೃತಿಗಳು ಪ್ರಕಟವಾಗಿವೆ. 

ರೇಚಂಬಳ್ಳಿ ದುಂಡಮಾದಯ್ಯ