About the Author

ಲೇಖಕ ಎಸ್.‌ ಪ್ರಕಾಶ್‌ ಬಾಬು ಪತ್ರಕರ್ತರು. ಅವರು ಮೂಲತಃ ಮೈಸೂರಿನವರು.ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮದೇ 'ಮುಂಗಾರು ಪ್ರಕಾಶನ' ಸಂಸ್ಥೆ ಮೂಲಕ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ ಕಾದಂಬರಿ, ಕಥಾ ಸಂಕಲನ, ಆತ್ಮಕಥನ, ಅನುವಾದ, ವಿಜ್ಞಾನ, ವಾಣಿಜ್ಯ ಸಾಹಿತ್ಯ ರಚನೆಯಲ್ಲೂ ಆಸಕ್ತರು.  2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಸತಿ ಮತ್ತು ಸಾರಿಗೆ ಸಮಿತಿ ಸಂಚಾಲಕರಾಗಿದ್ದರು.  ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜಯಂತಿ ಸಂದರ್ಭದಲ್ಲಿ 'ಸಚ್ಚಿದಾನಂದಶ್ರೀ' ಎಂಬ ಬೃಹತ್ ಗುರುವಂದನ ಗ್ರಂಥದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.

ಕೃತಿಗಳು; ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ, ಮೈಸೂರು ಗಾಂಧಿ ಎಚ್.ಸಿ. ದಾಸಪ್ಪ (ಜೀವನ ಚರಿತ್ರೆ).

ಎಸ್.‌ ಪ್ರಕಾಶ್‌ ಬಾಬು