About the Author

ಬರೆಹಗಾರ ಎಸ್‌. ಷಡಕ್ಷರಿ ಅವರು ತಮ್ಮ ಸಣ್ಣ ಕತೆಗಳ ಮೂಲಕ ಕನ್ನಡಿಗರ ಮನೆ ತಲುಪಿ ಯಶ ಸಾಧಿಸಿದವರು. ರಮಣಶ್ರೀ ಹೋಟೆಲ್ ಮತ್ತು ಸಮೂಹ ಉದ್ಯಮದ ಮುಖ್ಯಸ್ಥರಾಗಿದ್ದಾರೆ. ರಮಣಶ್ರೀ ಉದಯಶಾಲೆಯ ಮುಖ್ಯಸ್ಥರಾಗಿದ್ದಾರೆ.  ವ್ಯಕ್ತಿತ್ವಕ್ಕೆ ಸಂಬಂಧಸಿದಂತೆ ಹಲವಾರು ಪುಸ್ತಕಗಳನ್ನು ರಚಿಸಿ, ಬೋಧನಾ ತರಬೇತಿಗಳನ್ನು ನಿರ್ವಹಿಸಿದ್ದಾರೆ. ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣದ ಮೂಲಕ ಜನಮಾನಸಕ್ಕೆ ತಲುಪಿಸಿ, ಪುಟ್ಟ ನವಿರಾದ ನೀತಿ ಕತೆಗಳೊಂದಿಗೆ ಸಾಮಾಜಿಕ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವವರು. ಹಾಸ್ಯ ಬರೆಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ಬರೆಹಗಳು ಏಳು ಸಂಪುಟಗಳಲ್ಲಿ ಹೊರ ಬಂದಿವೆ. ಅವರ ‘ಕ್ಷಣ ಹೊತ್ತು ಆಣಿ ಮುತ್ತು ಭಾಗ-1’ ಹದಿನೆಂಟನೆಯ ಮುದ್ರಣ ಕಂಡು ದಾಖಲೆಯ ಮಾರಾಟವಾಗಿದೆ. 

 

ಎಸ್. ಷಡಕ್ಷರಿ