About the Author

ಬೆಳಗಾವಿಯ ಅಥಣಿ ತಾಲುಕಿನ ಐಗಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ಕೊಡಗಿನ ಗಿರಿಗಳನಡುವೆ ಬೆಳೆಯುತ ವ್ಯಾಸಂಗ ಮುಗಿಸಿದ ಸಂ..ಪತರ ಆಸಕ್ತಿ ಸೆಳೆದದ್ದು ಪತ್ರಿಕಾ ರಂಗದ ಕಡೆ. ಮೊದಲಿನಿಂದಲೇ ಆದಿವಾಸಿ ಸ್ನೇಹತರ ಒಡನಾಟ, ಪ್ರಕೃತಿ ಸಂರಕ್ಷಣೆ, ವನ್ಯ ಜೀವನದ ಜಾಡಿನ ಸುತ್ತಲಿನ ಆಸಕ್ತಿಯುನ್ನು ಹೆಚ್ಚಿಸಿತ್ತು. ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಸಂ...ಪತ ಕೆಲಕಾಲ 'ಕೌಶಲ್ಯ ಭಾರತದ' ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸಲು ಬೆಂಗಳೂರಿಗೆ ನೇಮಕವಾದ ಇವರು, ಇದೀಗ ಬೆಂಗಳೂರಿನ ಸಂವಾದ-ಬದುಕು ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತ್ಯಾಜ್ಯ ನಿರ್ವಹಣೆಯು ಇವರ ಆಸಕ್ತಿ ವಿಷಯವಾಗಿದ್ದು, ತ್ಯಾಜ್ಯದ ನಿರ್ವಹಣೆ ಬಗೆಗಿನ ಹೊಸ ಬಗೆಯ ಕೋರ್ಸ್ಸನ್ನು ನಿರ್ವಹಿಸುತ್ತಿದ್ದಾರೆ. ಯುವ ಸಮುದಾಯಕ್ಕೆ ಸುಸ್ಥಿರ ಜೀವನೋಪಾಯವನ್ನು ರೂಪಿಸುವದು ಇವರ ಗುರಿಯಾಗಿದ್ದು, ಅದು ಪರಿಸರ ಸಂರಕ್ಷಣೆಗೆ ಪೂರಕವಾಗಿರುವದರ ಸುತ್ತಲೇ ಇರಬಯಸುತ್ತಾರೆ. ಕವಿತೆ ಅವರ ಆಸಕ್ತಿಯ ಪ್ರಕಾರ.

ಸಂಪತ್ ಐಗಳಿ