About the Author

ರಂಗಕರ್ಮಿ, ಬರಹಗಾರ, ಪ್ರಾಧ್ಯಾಪಕರಾದ ತೋಂಟದಾರ್ಯ ಸಂಪಿಗೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡದ ಕಲಾದೇಗುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಕೂಡ ಆಗಿದ್ದಾರೆ. ವೀಡಿಯೋ ಡಾಕ್ಯುಮೆಂಟರಿ, ಕಿರುಚಿತ್ರಗಳಿಗೆ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊ.ಎಸ್. ಚಂದ್ರಶೇಖರ್‌ ಅವರ ಜೀವನ ಚರಿತ್ರೆ ಕೃತಿ ‘ಚಂದ್ರ’ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕ ಬಿತ್ತುವ ಬದುಕು ಇವರು ರಚಿಸಿದ ನಾಟಕ. 

ಸಂಪಿಗೆ ತೋಂಟದಾರ್ಯ