About the Author

ಸಂಧ್ಯಾ ಹೊನಗುಂಟಿಕರ್ ಅವರು ಜನಿಸಿದ್ದು 1964 ಅಕ್ಟೋಬರ್ 23, ಗುಲಬರ್ಗಾದಲ್ಲಿ. ತಂದೆ - ವಾಸುದೇವರಾವ್ ಕುಲಕರ್ಣಿ, ತಾಯಿ- ಸರೋಜಾಬಾಯಿ ಕುಲಕರ್ಣಿ. ಬಾಲ್ಯ ಕಳೆದಿದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಯಾದಗಿರಿಯಲ್ಲಿ. ಎಂ.ಎ. (ಕನ್ನಡ) ಪದವೀಧರೆ ಆಗಿರುವ ಅವರಿಗೆ ಸಮಾಜ ಸೇವೆ, ಅಭಿನಯ ಆಸಕ್ತಿಯ ಕ್ಷೇತ್ರಗಳು. ಕಡಲ ಒಡಲು ಬಗೆದಷ್ಟು (2002), ಹರಿದ ಹಾಸಿಗೆ ಹಂಬಲ (2008), ಹಾರಲಾಗದ ನೊಣ, (ಕತೆಯ ಸಂಕಲನಗಳು) ಯಶಸ್ವಿ ಬದುಕಿಗೆ ಮೆಟ್ಟಿಲು (ಶರಣರ ಹದಿನೈದು ಕತೆಗಳು) (ಮಕ್ಕಳ ಕಥಾ ಸಂಕಲನ) (2009), ಸೂರ್ಯ ಮುಖಿ (ಪ್ರಬಂಧಗಳು) ಸಖಿ ಶಕ್ತಿ (40 ವರುಷ ಸಮಾಜಮುಖಿ ಕೆಲಸದಲ್ಲಿರುವ ಸಂ. ಮ. ಮಂ.ದ ಪರಿಚಯಾತ್ಮಕ ಕೃತಿ) ಒಂದೇ ಕ್ಯಾನ್ವಾಸಿನಲ್ಲಿ (ಕಥಾಸಂಕಲನ) ಮತ್ತು ದಾಸ ದರ್ಪಣ (ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತು ಕಲಬುರ್ಗಿ ವತಿಯಿಂದ) ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವರ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಧಾರವಾಡದ  ವಿದ್ಯಾವರ್ಧಕದ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, “ಸಂಚಯ” ಸಾಂಸ್ಕೃತಿಕ ಪತ್ರಿಕೆಯ ಕಥಾಸರ್ಧೆಯಲ್ಲಿ ಪ್ರಥಮ ಬಹುಮಾನ, ಸಂಚಯ ಕವನ ಸ್ಪರ್ಧೆಯಲ್ಲಿ ಬಹುಮಾನ, ’ಕರವೇ ನಲ್ನುಡಿ ಪತ್ರಿಕೆಯ  ರಾಜ್ಯೋತ್ಸವ ಕಥಾ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ, ವಿಜಯವಾಣಿ ಪತ್ರಿಕೆಯ  ದೀಪಾವಳಿ ಕಥಾ  ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ, ’ಖರೇವಂದ್ರ ತಪ್ಪು' ಬಾನುಲಿ ನಾಟಕಕ್ಕೆ ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ  ಸರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಅವರಿಗೆ ರಂಗಮಾಧ್ಯಮ ಗುಲಬರ್ಗಾದಿಂದ ಗೌರವ, ರೋಟರಿಕ್ಲಬ್ ಗುಲಬರ್ಗಾದಿಂದ ’ಮಹಿಳಾ ರತ್ನ’ ಗೌರವ, ಕೆ.ಎಂ.ಎಫ್. ಗುಲಬರ್ಗಾದಿಂದ “ಮಹಿಳಾ ಸಾಧಕ” ಗೌರವ ಇವರಿಗೆ ಸಂದಿದೆ.  ಪ್ರಸ್ತುತ ಕಲಬುರ್ಗಿಯಲ್ಲಿ ವಾಸವಾಗಿರುವರು.

 

ಸಂಧ್ಯಾ ಹೊನಗುಂಟಿಕರ್

BY THE AUTHOR