About the Author

ಶರೀಫ್ ಹಸಮಕಲ್ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದವರು. "ಇತ್ತೀಚಿನ ಕನ್ನಡ ಕಾವ್ಯ ತಾತ್ವಿಕ ನೆಲೆಗಳು" ಎನ್ನುವ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನ ಕನ್ನಡ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ಇವರ ಕವನ ಸಂಕಲನ " ಚಿಲ್ಲರೆಗೆ ಕದಲದ ಜಾಗ" ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ದೊರೆತಿದೆ. ಹಾಗೆ ಅಕ್ಷರ ಅರಿವು ಎಂಬ ಮಕ್ಕಳ ನಾಟಕವನ್ನು ರಚಿಸಿದ್ದಾರೆ. ಪ್ರಸ್ತುತ ಹೊರ ತಂದ ಗಜಲ್ ಸಂಕಲನ "ಕಣ್ಣ ಬೊಗಸೆಯಲ್ಲಿ" ಎಂಬ ಗಜಲ್ ಸಂಕಲನಕ್ಕೆ "ಸೃಷ್ಟಿ ಕಾವ್ಯ" ಪ್ರಶಸ್ತಿ ದೊರೆತಿದೆ. ಸದ್ಯ ಇವರು ಸಿಂಧನೂರಿನ ವಿಜಡಮ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ‌.

ಕೃತಿಗಳು: ಕಣ್ಣ ಬೊಗಸೆಯಲ್ಲಿ, ಚಿಲ್ಲರೆಗೆ ಕದಲದ ಜಾಗ

ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ,"ಸೃಷ್ಟಿ ಕಾವ್ಯ" ಪ್ರಶಸ್ತಿ.

ಶರೀಫ್ ಹಸಮಕಲ್