About the Author

ಪತ್ರಕರ್ತ ಸಿದ್ದು ಬಿರಾದಾರ ಅವರು 1978 ಜೂನ್‌ 1ರಂದು ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಟಿವಿ 9 ಸುದ್ದಿ ವಾಹಿನಿಯಲ್ಲಿ ರಾಯಚೂರು ಜಿಲ್ಲಾ ಹಿರಿಯ ವರದಿಗಾರರು. ಅನ್ನ... ಅನ್ನ... ಅನ್ನ..., ವಿಶೇಷ ಸ್ಥಾನಮಾನ ಹಾಗೂ ’ನಿಮಗೊಂದು ಸಲಾ” ಕೃತಿ ರಚಿಸಿದ್ದಾರೆ. 

ಅನ್ನ..ಅನ್ನ..ಅನ್ನ.. ವಿಶೇಷ ವರದಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ರಾಮನಾಥ ಗೋಯಂಕ ರಾಷ್ಟ್ರೀಯ ಪ್ರಶಸ್ತಿ, ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಸಿಲಿಕೋಸಿಸ್ ಕಾಯಿಲೆಗೆ ಸಂಬಂಧಿಸಿದ ’ಬಂಗಾರದ ಪಂಜ” ವಿಶೇಷ ವರದಿಗೆ ENBA ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ. 

ಸಿದ್ದು ಬಿರಾದಾರ