About the Author

ಪ್ರಗತಿಪರ ಚಿಂತಕ, ಹೋರಾಟಗಾರ, ಪತ್ರಕರ್ತ ಸಿರಿಮನೆ ನಾಗರಾಜು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರು. ಕೊಪ್ಪದಲ್ಲಿ ಮುಂಜಾವು ಪತ್ರಿಕೆಯನ್ನು ನಡೆಸುತ್ತಿದ್ದ ಇವರು ಪ್ರಗತಿಪರ ಎಡಪಂಥೀಯ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದಿದ್ದರು.  ಕುದುರೆಮುಖ ಉಳಿಸಿ, ಪಶ್ಚಿಮ ಘಟ್ಟ ಉಳಿಸಿ ಮುಂತಾದ ಪರಿಸರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಪ್ರಸ್ತುತ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮುಂದಾಳತ್ವದಲ್ಲಿರುವ ಇವರು ದಲಿತ, ದಮನಿತ, ಬಡ ಜನರಿಗೆ ಭೂಮಿ ಮತ್ತು ವಸತಿ ಕೊಡಿಸುವ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. 

ಸಿರಿಮನೆ ನಾಗರಾಜ್

(23 Jul 1952)