About the Author

ಲೇಖಕಿ ಡಾ. ಸುವರ್ಣ ಎಂ ಹಿರೇಮಠ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ತಮ್ಮ ತಾಲೂಕಿನಲ್ಲಿ ಪೂರೈಸಿ, ಕಲಬುರಗಿಯ ಗೋದುತಾಯಿ ಪದವಿ ಕಾಲೇಜಿನಲ್ಲಿ ಬಿಎ ಪದವಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ, ಪಿ.ಎಚ್ ಡಿ ಪಡೆದರು. ‘ಹೈದರಾಬಾದ್-ಕರ್ನಾಟಕದ ಸಣ್ಣ ಕಥೆಗಳು’ ಇವರ ಸಂಶೋಧನಾ ಮಹಾಪ್ರಬಂಧ. ಇವರ ಹಲವಾರು ಬಿಡಿ ಲೇಖನಗಳು ಪ್ರಕಟಗೊಂಡಿವೆ.

ಕೃತಿಗಳು: ಜಾನಪದ ವೈಭವ

ಸುವರ್ಣ ಎಂ. ಹಿರೇಮಠ