About the Author

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಕರ್ಕಿಕೋಡಿಯವರಾದ ವಿ.ಗ. ನಾಯಕ ಅವರು ಮೂರುವರೆ ದಶಕ ದ.ಕ. ಜಿಲ್ಲೆಯ ಬಂಟ್ವಾಳದ ಅಡ್ಯನಡ್ಕದ ಜನತಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕವಿ, ವಿಮರ್ಶಕ, ಚಿಂತಕ ಹಾಗೂ ಜಾನಪದ ವಿದ್ವಾಂಸರಾಗಿರುವ ಅವರು ಅಡ್ಯನಡ್ಕ ಸ್ಮೃತಿ ಪ್ರಕಾಶನ ಹಾಗೂ ವೇದಿಕೆಗಳ ಸಂಚಾಲಕರಾಗಿದ್ದಾರೆ. ಅವರಿಗೆ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿವೆ. ಬಂಟ್ವಾಳ ತಾಲೂಕು ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಬಂಟ್ವಾಳ ತಾಲೂಕು ಕ.ಸಾ.ಪ. ಹಾಗೂ ದ.ಕ. ಜಿಲ್ಲಾ ಕ.ಸಾ.ಪ.ಗಳ ಗೌರವ ಕಾರ್ಯದರ್ಶಿಗಳಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಗೌರವ ಸದಸ್ಯರೂ ಆಗಿದ್ದ ಅವರು ಜನ್ಮಭೂಮಿ ಹೊನ್ನಾವರದಿಂದ 'ಹೊನ್ನೂರ ಜಾಜಿ' ಮತ್ತು ಕರ್ಮಭೂಮಿ ಅಡ್ಯನಡ್ಕದಿಂದ 'ನಾವಿಕ' ಅಭಿನಂದನ ಗ್ರಂಥಗಳು ಅವರಿಗೆ ಅರ್ಪಿಸಲಾಗಿದೆ.

ವಿ.ಗ. ನಾಯಕ