ಕೆದಂಬಾಡಿ ಜತ್ತಪ್ಪ ರೈ

Author : ವಿ.ಗ. ನಾಯಕ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಆರನೆಯ ಪುಸ್ತಕ ಕೆದಂಬಾಡಿ ಜತ್ತಪ್ಪ ರೈ. ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ಇಳಿಸಿ ದಿಢೀರಾಗಿ ಪ್ರಸಿದ್ದಿಗೆ ಬಂದವರು ಜತ್ತಪ್ಪ ರೈ ಅವರು. ಮಹಾಕವಿ ಕುವೆಂಪು ಮೊದಲಾದವರಿಂದಲೇ ಬೇಟೆ ಯ ಸಾಹಿತ್ಯಕ್ಕಾಗಿ ಪ್ರಶಂಸೆಗೆ ಒಳಗಾದ ಅವರು ಬನ್ನಂಜೆಯವರಿಂದ ’ಮೃಗಯಾ ಸಾಹಿತಿ’ ಎಂದೂ ಕರೆಸಿಕೊಂಡಿದ್ದರು. ತಮ್ಮ ಕೃತಿಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಅವರು ಸಾಹಿತ್ಯಲೋಕದಲ್ಲಿ ಏಕಕಾಲಕ್ಕೆ ಸಂಭ್ರಮ ಮತ್ತು ಬೆರಗು ಮೂಡಿಸಿದ್ದರು. ಬೇಟೆ ಸಾಹಿತ್ಯದ ನಾಲ್ಕು ಅನನ್ಯ ಅಸಾಧಾರಣ ಕೃತಿಗಳನ್ನು ನೀಡಿದ ರೈಗಳು ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲೂ ಅಪೂರ್ವ ಪಾಂಡಿತ್ಯ ಹೊಂದಿದದ್ದರು. ಈ ಕಾರಣಕ್ಕೆ ಅವರು ಸಂಸ್ಕೃತ ಮತ್ತು ಕನ್ನಡದಿಂದ ತುಳುವಿಗೆ ಇನ್ನಿಲ್ಲದಷ್ಟು ಸೊಗಸಾಗಿ ಅನುವಾದಿಸಿದ ಹೆಗ್ಗಳಿಕೆಗೂ ಪಾತ್ರರಾದರು. ದಕ್ಷಿಣ ಕನ್ನಡದ ಪ್ರತೂರು ಸಮೀಪದ ಪಾಣಾಜೆಯಲ್ಲಿ ಜನಿಸಿದ್ದ ಅವರು (11.02.1916) ಅದಮ್ಯ ಜೀವನೋತ್ಸಾಹದಿಂದ ಎಳೆಯರಿಗೆ ಮತ್ತು ಗೆಳೆಯರಿಗೆ ಮಾದರಿಯಾಗಿ ಬದುಕಿ 20-06-2003 ರಂದು ಕಾಲವಶರಾದರು. ಅವರ ಜೀವನ- ಸಾಧನೆಯನ್ನು ಈ ಕೃತಿ ನೀಡುತ್ತದೆ.

About the Author

ವಿ.ಗ. ನಾಯಕ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಕರ್ಕಿಕೋಡಿಯವರಾದ ವಿ.ಗ. ನಾಯಕ ಅವರು ಮೂರುವರೆ ದಶಕ ದ.ಕ. ಜಿಲ್ಲೆಯ ಬಂಟ್ವಾಳದ ಅಡ್ಯನಡ್ಕದ ಜನತಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕವಿ, ವಿಮರ್ಶಕ, ಚಿಂತಕ ಹಾಗೂ ಜಾನಪದ ವಿದ್ವಾಂಸರಾಗಿರುವ ಅವರು ಅಡ್ಯನಡ್ಕ ಸ್ಮೃತಿ ಪ್ರಕಾಶನ ಹಾಗೂ ವೇದಿಕೆಗಳ ಸಂಚಾಲಕರಾಗಿದ್ದಾರೆ. ಅವರಿಗೆ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿವೆ. ಬಂಟ್ವಾಳ ತಾಲೂಕು ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಬಂಟ್ವಾಳ ತಾಲೂಕು ಕ.ಸಾ.ಪ. ಹಾಗೂ ದ.ಕ. ಜಿಲ್ಲಾ ಕ.ಸಾ.ಪ.ಗಳ ಗೌರವ ಕಾರ್ಯದರ್ಶಿಗಳಾಗಿದ್ದರು. ...

READ MORE

Related Books