About the Author

ಲೇಖಕ ವಿ.ಕೆ.ತಾಳಿತ್ತಾಯ ಅವರು (ಕೃಷ್ಣಮೂರ್ತಿ ತಾಳಿತ್ತಾಯ) ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿದ್ದು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಮಂಗಳೂರಿನಲ್ಲಿ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಯ ಸದಸ್ಯರು.  

ಕೃತಿಗಳು: ನಾನೊಂದು ಪ್ರಶ್ನೆ ಕೇಳಲೇ ?,  ಅಧ್ಯಾಪಕರು ವ್ಯಕ್ತಿತ್ವದ ಶಿಲ್ಪಿ. ವಿಜ್ಞಾನದ ತಾತ್ವಿಕ ನೆಲೆ. ಟೀಚರ್ (ಆಂಗ್ಲಕೃತಿ) ಕ್ರಿಯೆಟಿಂಗ್ ಚಾಯಿಸೆಸ್ (ಆಂಗ್ಲ ಕೃತಿ) 

 

ವಿ. ಕೆ. ತಾಳಿತ್ತಾಯ