ಅರ್ಥಶಾಸ್ತ್ರದ ಪರಿಕಲ್ಪನೆಗಳು

Author : ವಿ. ಕೆ. ತಾಳಿತ್ತಾಯ

Pages 144

₹ 180.00




Year of Publication: 2024
Published by: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Address: ನವಕರ್ನಾಟಕ ಪ್ರೈವೆಟ್ ಲಿಮಿಟೆಡ್ ಎಂಬೆಸಿ ಸೆಂಟರ್,ಕ್ರೆಸೆಮಟ್ ರಸ್ತೆ, ಬೆಂಗಳೂರು- 560 001
Phone: 080- 22161900

Synopsys

‘ಅರ್ಥಶಾಸ್ತ್ರದ ಪರಿಕಲ್ಪನೆಗಳು’ ವಿ.ಕೆ. ತಾಳಿತ್ತಾಯ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಮುನ್ನುಡಿ ಬರಹವಿದೆ; ವಿಜ್ಞಾನ ಮತ್ತು ತತ್ವಜ್ಞಾನ ಒಂದಕ್ಕೊಂದು ನಿಕಟ ಸಂಬಂಧವಿರುವ ವಿಷಯಗಳು ತತ್ವಜ್ಞಾನ ವಿಜ್ಞಾನದ ಕಾರ್ಯಕಲಾಪಗಳನ್ನು ವಿಮರ್ಶೆಗೀಡು ಮಾಡುತ್ತಿದ್ದರೆ ವಿಜ್ಞಾನಿಗಳೂ ತಮ್ಮ ಕೆಲಸದ ಕುರಿತು ತಾತ್ವಿಕ ಚಿಂತನೆಯಲ್ಲಿ ನಿರತರಾಗಿರುವುದೆ ಸರ್ವೆಸಾಮಾನ್ಯ ಈ ಕಿರು ಪುಸ್ತಕ ವಿಜ್ಞಾನ ಮತ್ತು ತತ್ವಜ್ಞಾನಗಳೊಳಗಿನ ಈ ವಿಶಿಷ್ಟ ಸಂಬಂಧದ ಕುರಿತು. ಜನಸಾಮಾನ್ಯರಿಗೆ ಅದರ ಕುರಿತು ಒಂದು ಸಂಕ್ಷಿಪ್ತ ಪರಿಚಯ ಇಲ್ಲಿ ನಾವು ವಿಜ್ಞಾನ-ತತ್ವಜ್ಞಾನದ ವಿವಿಧ ಆಯಾಮಗಳ ಪರಿಚಯ ಮಾಡುತ್ತಿದ್ದರೂ ಓದುಗರು ಅವರವರ ಅಭಿರುಚಿಯಂತೆ ಯಾವ ಅಧ್ಯಾಯವನ್ನೂ ಪ್ರತ್ಯೇಕವಾಗಿ ಓದಬಹುದು. ವಿಜ್ಞಾನ ಮತ್ತು ತತ್ವಜ್ಞಾನ, ಇವೆರಡೂ ಒಂದೇ ಗುರಿಯನ್ನಿಟ್ಟುಕೊಂಡಿರುತ್ತವೆ - ಅದೆಂದರೆ ಸತ್ಯವನ್ನು ಅರಿಯುವುದು, ಮೂಲಭೂತ, ಸರ್ವೋತ್ಕೃಷ್ಟ ಸತ್ಯವನ್ನು ತಿಳಿದುಕೊಳ್ಳುವುದು. ಎಲ್ಲಾ ವಿದ್ಯಮಾನಗಳ ಮೂಲದ ಅರ್ಥವನ್ನು ಅರಿಯುವ ಈ ಗುರಿಯನ್ನು ಅವರು ತಲುಪುತ್ತಾರೋ ಇಲ್ಲವೋ ಎಂಬುವುದು ಮುಖ್ಯವಲ್ಲ ಮಾನವ ಜಾತಿಯ ಮುಖ್ಯ ಲಕ್ಷಣವಾದ ಕುತೂಹಲವೇ ಅವರನ್ನು ಈ ಗುರಿಯತ್ತ ಪಯಣಿಸುವಂತೆ ಪ್ರೇರೆಪಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ವಿ. ಕೆ. ತಾಳಿತ್ತಾಯ

ಲೇಖಕ ವಿ.ಕೆ.ತಾಳಿತ್ತಾಯ ಅವರು (ಕೃಷ್ಣಮೂರ್ತಿ ತಾಳಿತ್ತಾಯ) ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿದ್ದು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಮಂಗಳೂರಿನಲ್ಲಿ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಯ ಸದಸ್ಯರು.   ಕೃತಿಗಳು: ನಾನೊಂದು ಪ್ರಶ್ನೆ ...

READ MORE

Related Books