About the Author

ಕವಯತ್ರಿ ವಿಜಯ ಪದ್ಮಶಾಲಿ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನವರು. ತಂದೆ ರಂಗಸಂದ್ರಂ ಹನುಮಂತಪ್ಪ ತಾಯಿ ವೆಂಕಟಮ್ಮ.  ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸ. ಕತೆ, ಕವನ, ಲೇಖನ, ಷಟ್ಪದಿ, ಮುಕ್ತಕ, ಚುಟುಕು, ಹನಿಗವನ ಬರೆಯುವುದರಲ್ಲಿ ಆಸಕ್ತಿ ಹೊಂದಿದವರು. ಹದಿನೈದು ವರ್ಷಗಳಿಂದ ಸ್ಥಳೀಯ ಪತ್ರಿಕೆಗಳಿಗೆ ಪದಬಂಧ ರಚನೆಕಾರರು. ’ಭಾವೋಲ್ಲಾಸ’ ಅವರ ಪ್ರಥಮ ಕವನ ಸಂಕಲನ. ಕಾವ್ಯ ಕಲ್ಪವಲ್ಲಿ ಎಂಬುದು ಕಾವ್ಯನಾಮ.

ಪ್ರಶಸ್ತಿಗಳು :  ತ್ರಿಕಾಲಜ್ಞಾನಿ ಕೈವಾರ ತಾತಯ್ಯ ರಾಷ್ಟ್ರ ಪ್ರಶಸ್ತಿ ,ಕನ್ನಡ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಸಾಹಿತ್ಯ ಸುಮ ಪ್ರಶಸ್ತಿ 

ಕೃತಿಗಳು :  ಭಾವೋಲ್ಲಾಸ ಕವನ ಸಂಕಲನ , ಮೇರುಗುರು ಕೈವಾರ ತಾತಯ್ಯ ಮುಕ್ತಕ ಕಾವ್ಯ ,ಅಬಲೆಯಲ್ಲ ಸಬಲೆ ,ಬುಗುರಿ ಕವನ ಸಂಕಲನ , ಶತಾಯುಷಿ ಕಥಾ ಸಂಕಲನ 

 

ವಿಜಯ ಪದ್ಮಶಾಲಿ

(03 Jul 1969)