About the Author

ಲೇಖಕ ವಿಜಯಕುಮಾರ್‌ ಧ. ನೇರ್ಲೆಕರ್‌  ಅವರು ಬಿ.ಎಸ್ಸಿ. ಕೃಷಿ ಪದವೀಧರರು. ಭಾರತೀಯ ಬ್ಯಾಂಕ್‌ ಒಕ್ಕೂಟದ ಸಿ.ಎ.ಐ.ಐ.ಬಿ ಪದವೀಧರರು.  ಸಿಂಡಿಕೇಟ್‌ ಬ್ಯಾಂಕಿನಲ್ಲಿ 1980 ರಲ್ಲಿ ಗ್ರಾಮೀಣ ಅಭಿವೃದ್ದಿ ಅಧಿಕಾರಿಯಾಗಿ ವೃತ್ತಿ ಆರಂಭಿಸುವ ಲೇಖಕರು, ಶಾಖಾ ಪ್ರಬಂಧಕರಾಗಿ, ಅಗ್ರಣೀಯ ಬ್ಯಾಂಕ್‌ ಪ್ರಬಂಧಕರಾಗಿ ದೆಹಲಿಯ ಬ್ಯಾಂಕ್‌ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರಾಗಿ, 2015 ರಲ್ಲಿ ಸಹಾಯಕ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದಿರುತ್ತಾರೆ. ಉದ್ಯಮಶೀಲತೆ ಅಭಿವೃದ್ಧಿ ತರಬೇತುದಾರರಾಗಿರುವ ಲೇಖಕರು, ಉದ್ಯಮಶೀಲತೆಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿರುವರು. ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ಕುರಿತು ಅವರ ಲೇಖನಗಳು ವ್ರತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ.

ಕೃತಿಗಳು: ಶ್ರೇಯಸ್ಸು (ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಮಗ್ರ ಸಾಧನೆಗಳ ಕುರಿತ ಕೃತಿ)

ವಿಜಯಕುಮಾರ್‌ ಧ. ನೇರ್ಲೆಕರ್‌