About the Author

ಸಿನೆಮಾ-ಕಿರುತೆರೆ ಸಾಹಿತ್ಯದಲ್ಲಿ ತೊಡಗಿರುವ ವಿನಾಯಕ‌ ಕೋಡ್ಸರ ಅವರು ಸಾಗರದ ಸಮೀಪ ಕೋಡ್ಸರದವರು. 1987 ಜನವರಿ 28ರಂದು ಜನನ. ವೃತ್ತಿಯಿಂದ ಪತ್ರಕರ್ತರು. ಧಾರವಾಹಿಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ಧಾರೆ. ‘ಅಕ್ಷರ ವಿಹಾರ’-ಲಘು ಲೇಖನಗಳ ಸಂಕಲನ. 

ಪತ್ರಿಕೆಗೆ ಬರೆಯೋದು ಹೇಗೆ?, ನೀವೂ ಪತ್ರಕರ್ತರಾಗಬೇಕೆ?- ಸಂಪಾದಿತ ಕೃತಿಯಾಗಿದ್ದು ‘ಮೂಗಿಮನೆ’ ಅವರ ಮೊದಲ ಕಥಾ ಸಂಕಲನ. ‘ಗೆಲುವು ನಿಮ್ಮದಾಗಬೇಕೆ?’ ಎಂಬ ಸ್ಫೂರ್ತಿದಾಯಕ ಕಥೆಗಳನ್ನು ರಚಿಸಿದ್ದು 2 ಕಿರುಚಿತ್ರಗಳಿಗೆ ಮತ್ತು ಅನೇಕ‌ ಡಾಕ್ಯುಮೆಂಟರಿಗಳಿಗೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಸಿನಿಮಾ ನಿರ್ದೇಶನದಲ್ಲಿ ತೊಡಗಿದ್ದಾರೆ. 

ವಿನಾಯಕ ಕೊಡ್ಸಾರ

(28 Jan 1987)