ಛಂದೋಗತಿ

Author : ಸೇಡಿಯಾಪು ಕೃಷ್ಣಭಟ್ಟ

Pages 228

₹ 175.00




Year of Publication: 2019
Published by: ತನು ಮನು ಪ್ರಕಾಶನ
Address: 1ನೇ ಕ್ರಾಸ್ ರೋಡ್,ಶ್ರೀರಾಮ್ ಪುರ, ಮೈಸೂರು ಕರ್ನಾಟಕಮ - 570023

Synopsys

‘ಛಂದೋಗತಿ’ ಕೃತಿಯು ಸೇಡಿಯಾಪು ಕೃಷ್ಣಭಟ್ಟರ ಛಂದಸ್ತತ್ವಗಳ ಹಾಗೂ ಗತಿಭೇದಗಳ ವಿವೇಚನೆ ಮತ್ತು ವಿವೃತಿಯಾಗಿದೆ. ಲಯವೆಂದರೆ, ಯಾವುದೊಂದು ರಚನೆಯ ಅವಯವಗಳ ಅನ್ಯೋನ್ಯ ಕಾಲಸಮತ್ವ. ಆ ಸಮತ್ವವೇ ತಾಳದ ಆಧಾರ, ಆದುದರಿಂದ ಅದು ತಾಳದ ಅವಿಭಾಜ್ಯ ಅಂಗ. ಯಾವುದಾದರೊಂದು ಛಂದೋರಚನೆಯ ಅವಯವಗಳೊಳಗೆ ಕಾಲಸಮತ್ವವಿಲ್ಲದಿದ್ದರೆ ಅಲ್ಲಿ ತಾಳವಿಲ್ಲ : ಸಮತಾಳಕ್ಕೆ ಒಳಪಡದಿರುವ ರಚನೆಗಳಲ್ಲಿ ಲಯವಿಲ್ಲ. ಆದುದರಿಂದ ಲಯನ್ವಿತವಾದ ಛಂದೋರಚನೆ ಎಂದರೂ ತಾಳಬದ್ದವಾದ ಛಂದೋರಚನೆ ಅಂದರೂ ಅರ್ಥ ಬೇರಾಗುವಂತಿಲ್ಲ ಎಂಬುದನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಈ ಕೃತಿಯು ಒಂಭತ್ತು ಪರಿಚ್ಛೇದಗಳನ್ನು ಒಳಗೊಂಡಿದ್ದು, ಪರಿಚ್ಛೇದ ಒಂದರಲ್ಲಿ ಲಯ ಎಂಬ ಸಜ್ಞೆಯ ಅರ್ಥಸ್ವರೂಪ : ಶಬ್ಧಕೋಶದಲ್ಲಿ ನಾಟ್ಯಶಾಸ್ತ್ರದಲ್ಲಿ, ಶಿಕ್ಷಾಶಾಸ್ತ್ರದಲ್ಲಿ ಶಾಸ್ತ್ರೇತರ ಗ್ರಂಥದಲ್ಲಿ, ಸಂಗೀತಸಂಪ್ರದಾಯದಲ್ಲಿ. ಪರಿಚ್ಛೇದ ಎರಡರಲ್ಲಿ : ಛಂದಶಾಸ್ತ್ರ ಗ್ರಂಥಗಳಲ್ಲಿ ಪ್ರಯುಕ್ತವಾಗಿರುವಂತೆ ಲಯದ ಅರ್ಥ ಮತ್ತು ವ್ಯಾಪ್ತಿ, ಪರಚ್ಛೇಧ ಮೂರು : ಗತಿ ಮತ್ತು ಲಯ, ಪರಿಚ್ಚೇದ ನಾಲ್ಕು : ಛಂದಸ್ ಮತ್ತು ಗತಿ, ಪರಿಚ್ಛೇದ ಐದು : ಛಂದಪದಾರ್ಥ ವಿವೇಚನೆ, ಪರಿಚ್ಛೇದ ಆರು : ಛಂದೋಗತಿ ಭೇದಗಳು - ಆವರ್ತಗತಿಗಳ ವಿವೃತಿ, ಪರಿಚ್ಛೇದ ಎಂಟು :ವಿಷಮ ಗತಿ ಬಂಧಗಳ ದ್ವೈವಿಧ್ಯ - ವಿಷಮಗತಿವೃತ್ತಗಳು, ಪರಿಚ್ಛೇದ ಒಂಭತ್ತು : ಅಕ್ಷರ ಜಾತಿಗಳು : ಅನುಷ್ಟುಪ್ ಶೋಕದ ವಿಕಾಸ, -ಉಪಜಾತಿಗಳ ಉತ್ಪತ್ತಿ, ವೈದಿಕ ಛಂದಃಸ್ವಭಾವ ದಿಗ್ದರ್ಶನ ಇವೆಲ್ಲವುಗಳನ್ನು ಒಳಗೊಂಡಿದೆ.

About the Author

ಸೇಡಿಯಾಪು ಕೃಷ್ಣಭಟ್ಟ
(08 June 1902 - 09 June 1996)

ಸೇಡಿಯಾಪು ಕೃಷ್ಣಭಟ್ಟರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸೇಡಿಯಾಪು.ತಂದೆ ರಾಮಭಟ್ಟ, ತಾಯಿ ಮೂಕಾಂಬಿಕೆ. ಸ್ವಾತಂತ್ರ್ಯ ಹೋರಾಟಗಾರರು, ಕವಿತೆ, ಕಥೆ ಸಂಶೋಧನೆ ಕುರಿತು ಕೃತಿಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಚಂದ್ರಖಂಡ ಮತ್ತು ಕೆಂಪು ಸಣ್ಣ ಕಾವ್ಯಗಳು, ವಿಚಾರ ಪ್ರಪಂಚ, ಪಳಮೆಗಳು, ಕನ್ನಡ ವರ್ಣಗಳು, ಕೆಲವು ದೇಶನಾಮಗಳ ಛಂದೋಗತಿ, ಡಿಸ್ಕವರಿ ಆಫ್ ಫ್ಯಾಕ್ಟ್ಸ್‌ (ಇಂಗ್ಲೀಷ್) ಮುಂತಾದವು. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಪಂಪ ಪ್ರಶಸ್ತಿ ಲಭಿಸಿದೆ ಚಿದಾನಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...

READ MORE

Related Books