ಕನ್ನಡ ಛಂದಸ್ಸು ಸಂಕ್ಷಿಪ್ತ ಪರಿಚಯ

Author : ಬಿ.ಆರ್. ಸತ್ಯನಾರಾಯಣ

Pages 102

₹ 118.00




Year of Publication: 2003
Published by: ಸುಮುಖ ಪ್ರಕಾಶನ
Address: ಬೆಂಗಳೂರು

Synopsys

ಕನ್ನಡ ಛಂದಸ್ಸನ್ನು ಸರಳವಾಗಿ ಹಾಗೂ ಸಮಗ್ರವಾಗಿ ಪರಿಚಯಿಸುವ ಕೃತಿಯಿದು. ಕನ್ನಡ ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ರಚಿಸಲಾಗಿದೆ. ಛಂದಸ್ಸು ಪತ್ರಿಕೆಗೆ ಉತ್ತರ ಬರೆಯ ಬಯಸುವ ಅಭ್ಯಾಸಿಗಳಿಗೆ ಪೂರಕವಾಗಿದೆ. ಈ ಪುಸ್ತಕದಲ್ಲಿ ನೀಡಲಾದ ಉದಾಹರಣೆಗಳು ಜನಪ್ರಿಯ ಹಾಗೂ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹವುಗಳಾಗಿವೆ. ಸಾಮಾನ್ಯರಿಗೂ ಉಪಯೋಗ ಆಗುವಂತೆ ಛಂದಸ್ಸಿನ ಪರಿಚಯ ನೀಡಲಾಗಿದೆ.

About the Author

ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್‍. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...

READ MORE

Related Books