ಹೂ ಹಸಿರಿನ ಮಾತು

Author : ಎಲ್.ಸಿ. ಸುಮಿತ್ರಾ

Pages 96

₹ 120.00




Year of Publication: 2012
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ಹೂ ಹಸಿವಿನ ಮಾತು' ಕೃತಿಯಲ್ಲಿ ಒಟ್ಟು 23 ವಿವಿಧ ಹೂಗಿಡ, ಮರಗಳ ಪರಿಚಯವಿದೆ. ‘ಸುರಗಿಯ ಸಿರಿ’’, 'ಆಶೋಕ ವನದಲ್ಲಿ, ‘ರಂಜವೆಂಬ ಬಕುಲದ ಹೂ', 'ಮಾದಕ ಮಾಧವಿ ಲತೆ', 'ಕಾಡಿನ ಆಭರಣ ಸಿಗ್ದಾಳಿ ಹೂ' ಹೀಗೆ ಶೀರ್ಷಿಕೆಯಲ್ಲಿ ಈ ಹೂಗಳ ಆಕರ್ಷಣೆಯ ಪರಿಚಯ ಸಿಗುತ್ತದೆ. ಲೇಖನದ ಜೊತೆಜೊತೆಗೆ ಹಾಗೂ ಮಧ್ಯದ ಪುಟಗಳಲ್ಲಿ ಇರುವ ಫೋಟೋಗಳು ಓದುಗರ ಕುತೂಹಲವನ್ನು ತಣಿಸುತ್ತವೆ. ನಮ್ಮ ಪಶ್ಚಿಮ ಘಟ್ಟಗಳು ಜೀವವೈವಿಧ್ಯದ ತವರು. ಅಲ್ಲಿರುವ ಅಪರೂಪದ ಸಸ್ಯ. ಪ್ರಾಣಿಗಳ ಅರಿವು ನಗರದವರಿಗಂತೂ ಇರುವುದೇ ಇಲ್ಲ ಈ ಕೃತಿಯ ಪುಟ್ಟ ಪುಟ್ಟ ಲೇಖನಗಳು ಇಂತಹ ಅಪರೂಪದ ವಿಶಿಷ್ಟ ಮರ, ಗಿಡಗಳ ಪರಿಚಯವನ್ನು ಸಸ್ಯ ಶಾಸ್ತ್ರೀಯವಾಗಿ ಮಾತ್ರವಲ್ಲದೆ ಜೀವನಾನುಭವ ಹಾಗೂ ಕಾವ್ಯದ ಸಾಲುಗಳು ಬೆರೆತ ಲವಲವಿಕೆಯ ಶೈಲಿಯಲ್ಲಿ ಪರಿಚಯ ಮಾಡಿಕೊಡುತ್ತವೆ. 'ಸುರಗಿಯ ಸಿರಿ' ಎಂಬ ಲೇಖನ ಹೀಗೆ ಆರಂಭಗೊಳ್ಳುತ್ತದೆ. 'ಮರದ ಸಮೀಪ ಹೋಗುವಷ್ಟರಲ್ಲಿ ಗಾಢ ಪರಿಮಳ, ಜೇನುಗಳ-ದುಂಬಿಗಳ ಝೇಂಕಾರ ನಮ್ಮನ್ನು ಸ್ವಾಗತಿಸಿತು. 'ಸುರಿವ ಸುರಯಿಯರು ಮಗುಳ್ಳೆ ಮೊಗಸಿದಳಿಕುಳಂಗಳಿ' ಎಂಬ ಕವಿ ಪ೦ಪನ ವರ್ಣನೆ ನೆನವಾಯಿತು.". ಲೇಖಕಿಯು ಸದಾ ಸಾಹಿತ್ಯದ ಸಾನ್ನಿಧ್ಯದಲ್ಲಿರುವವರಾದ್ದರಿಂದ ಕವಿನುಡಿಗಳನ್ನು ನೆನಪಿಸಿಕೊಳ್ಳುತ್ತ ಮರಗಿಡಗಳನ್ನು ಪರಿಚಯಿಸುತ್ತಾರೆ.

About the Author

ಎಲ್.ಸಿ. ಸುಮಿತ್ರಾ

ಜನಪ್ರಿಯ ಲೇಖಕಿ ಸುಮಿತ್ರ ಎಲ್.ಸಿ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಹಾಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರ ಅವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ನೀಲಗಂಗಾದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ನೀಡಿ ಗೌರಿವಿಸಲಾಗಿದೆ. ...

READ MORE

Related Books