ಕೀಟ ಜಗತ್ತು

Author : ಕೃಷ್ಣಾನಂದ ಕಾಮತ್

Pages 144

₹ 125.00




Year of Publication: 2012
Published by: ಬೈರೇಗೌಡ ಪ್ರಗತಿ ಗ್ರಾಫಿಕ್ಸ್
Address: #119 ಕ್ರಾಸ್, 8ನೇ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು- 560104

Synopsys

‘ಕೀಟ ಜಗತ್ತು’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕೀಟ ಜಗತ್ತಿನ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ ‘ಡಾ. ಕೃಷ್ಣಾನಂದ ಕಾಮತ್ (1934-2002) ಕನ್ನಡ ನಾಡು ಕಂಡ ಅಪೂರ್ವ ಪ್ರತಿಭೆ. ಅಪ್ಪಟ ಮನುಷ್ಯರು. ಸಂಶೋಧಕರು, ಕಾಲುಗಳಿಗೆ ಚಕ್ರ ಕಟ್ಟಿಕೊಂಡು ಸುತ್ತಿದ್ದ ಅಪರೂಪದ ಕ್ಷೇತ್ರಕಾರ್ಯಕರ್ತರು, ಸೃಜನಶೀಲ ಬರಹಗಾರರು, ಅಪೂರ್ವ ಕುಂಚ ಕಲಾವಿದರು, ಛಾಯಾಗ್ರಾಹಕರು, ಪ್ರಾಣಿ-ಪಕ್ಷಿಗಳ ತಜ್ಞರು, ಒಬ್ಬ ವಿಜ್ಞಾನಿ, ಪಾಕಪ್ರವೀಣರು. ಹೀಗೆ ಬಹು ಆಯಾಮಗಳಲ್ಲಿ ತಮ್ಮ ಜೀವಿತಾವಧಿಯನ್ನು ಸವೆಸಿದ ಅನರ್ಘ ರತ್ನ, ಕಾಮತರ ಯಾವುದೇ ಬರವಣಿಗೆಯಲ್ಲೂ ಒಬ್ಬ ಸಂಶೋಧಕನಿರುತ್ತಾನೆ. ಬರಹದ ವಿಷಯ ವಸ್ತು ವಿಚಾರದಲ್ಲಿ ತರ್ಕಬದ್ಧವಾದ, ವೈಜ್ಞಾನಿಕ ದೃಷ್ಟಿಕೋನ ಎದ್ದು ಕಾಣುವ ಅಂಶ. ಲಘು ಹರಟೆಯ ಅವರ ಧಾಟಿ ಓದುಗಸ್ನೇಹಿಯಾಗಿರುತ್ತದೆ. ತುಂಬಾ ಗಹನವಾದ ವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ನಿರೂಪಣೆಯನ್ನು ಕಾಣಬಹುದು. ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ತಿಳಿಹೇಳುವ ಛಾತಿ ಕೃಷ್ಣಾನಂದ ಕಾಮತರ ಲೇಖನಿ, ಕುಂಚ, ಕ್ಯಾಮೆರಾಗಳಿಗೆ ಇತ್ತು ಎಂಬುದನ್ನು ಅವರನ್ನು ಓದಿಕೊಂಡ ಯಾರಿಗಾದರೂ ಅನಿಸದಿರದು. ಭಾರತದ ಆದಿವಾಸಿ ಬದುಕಿನ ಅನೇಕ ಮಜಲುಗಳನ್ನು ಕಣ್ಣಾರೆ ಕಂಡು ಕಾಮತರು ಬಿಡಿಸಿಟ್ಟಿದ್ದಾರೆ’ ಎಂದಿದೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books