ಮಳೆ

Author : ಟಿ. ಆರ್. ಅನಂತರಾಮು

Pages 26

₹ 8.00




Year of Publication: 1994
Published by: ಕನ್ನಡ ವಿಶ್ವವಿದ್ಯಾಲಯ
Address: ವಿದ್ಯಾರಣ್ಯ, ಹಂಪಿ.

Synopsys

ಲೇಖಕ ಟಿ.ಆರ್. ಅನಂತರಾಮು ಅವರು ಮಕ್ಕಳಿಗಾಗಿ ಬರೆದ ಬಹುಮುಖ್ಯ ಕೃತಿ ‘ಮಳೆ’. ಮಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ? ಮನುಷ್ಯನಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಮಳೆಯ ಅರಿವಾಗುತ್ತದೆ. ಮಳೆ ನಮ್ಮ ಕೃಷಿಗೆ ಆಧಾರ, ಮಳೆ ನಿರ್ದಿಷ್ಟ ಕಾಲದಲ್ಲೇ ಏಕೆ ಆಗುತ್ತದೆ? ಹೇಗೆ ಆಗುತ್ತದೆ? ಯಾವ ಯಾವ ಅಂಶಗಳು ಮಳೆಗೆ ಕಾರಣವಾಗುತ್ತವೆ ಎಂಬುದನ್ನು ಅತ್ಯಂತ ಸರಳವಾಗಿ ಮಕ್ಕಳಿಗೂ ಅರ್ಥವಾಗುವಂತೆ ಈ ಪುಸ್ತಕದಲ್ಲಿ ಬರೆಯಲಾಗಿದೆ.

ಅಷ್ಟೇ ಅಲ್ಲ, ನಮ್ಮ ಪ್ರಾಚೀನರು 27 ನಕ್ಷತ್ರಗಳನ್ನು ಮಳೆ ನಕ್ಷತ್ರಗಳೆಂದೇ ಗುರುತಿಸಿದ್ದಾರೆ. ಈಗಲೂ `ಭರಣಿ ಮಳೆ ಬಿದ್ದರೆ ಧರಣಿ ತುಂಬ ಬೆಳೆ’ ಎಂದು ರೈತರು ಹೇಳುತ್ತಾರೆ. ಹಿಂಗಾರು ಮಳೆ ಮತ್ತು ಮುಂಗಾರು ಮಳೆಯ ವೈಶಿಷ್ಟ್ಯವೇನು? ಕೃತಕ ಮಳೆಯನ್ನು ಸೃಷ್ಟಿಸುವುದು ಹೇಗೆ ಎಂಬೆಲ್ಲ ಅಂಶವನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಜೊತೆಗೆ ಮನುಷ್ಯ ವಾಯುಗೋಳವನ್ನು ಹಾಳುಮಾಡಿ ಹುಳಿಮಳೆ ಬೀಳುವಂತೆ ಮಾಡಿದ್ದಾನೆ. ಇಂಥವನ್ನು ಹೇಗೆ ತಡೆಯಬಹುದು ಎಂಬ ಸೂಚನೆಯೂ ಇಲ್ಲಿದೆ. ಮಳೆಯ ಕುರಿತು ಪ್ರಾಥಮಿಕ ಅರಿವು ಪಡೆಯಲು ಈ ಕೃತಿ ನೆರವಿಗೆ ಬರುತ್ತದೆ.

 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books