ಪರಿಸರ ಪ್ರಜ್ಞೆ

Author : ಭೈರಪ್ಪ ಕೆ.

Pages 223

₹ 113.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಲೇಖಕ ಪ್ರೊ. ಕೆ. ಭೈರಪ್ಪ ಅವರ ಕೃತಿ-ಪರಿಸರ ಪ್ರಜ್ಞೆ. ವಿಶ್ವವು ಇಂದು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಪರಿಸರ ಮಾಲಿನ್ಯವೂ ಒಂದು. ಈ ಸಮಸ್ಯೆ ಇತರೆ ಸಮಸ್ಯೆಗಳಿಗಿಂತಲೂ ತುಂಬಾ ಗಂಭೀರವಾಗಿದೆ. ತುರ್ತು ಸ್ಥಿತಿಯ ಮಾದರಿಯಲ್ಲಿ ಪರಿಸರ ಮಾಲಿನ್ಯತೆಯ ಸಮಸ್ಯೆಗೆ ಪರಿಹಾರ ಕಂಡು ಹಿಡಿಯದಿದ್ದರೆ ಉಸಿರಾಡಲೂ ಸಹ ಕಷ್ಟ ಪಡುವಂತಹ ಸ್ಥಿತಿ ಎದುರಾಗುತ್ತದೆ. ಆದ್ದರಿಂದ, ಮಕ್ಕಳು, ದೊಡ್ಡವರು, ಅಕ್ಷರಸ್ಥರು, ಅನಕ್ಷರಸ್ಥರು ಎನ್ನದೇ ಸರ್ವರೂ ಜಾಗತಿಕವಾಗಿ ಈ ಸಮಸ್ಯೆಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಮೂಲಕ ನಮ್ಮಷ್ಟಕ್ಕೆ ನಾವೇ ನಾಗರಿಕರು ಎಂಬುದನ್ನು ಸಾಬೀತುಪಡಿಸಬೇಕಿದೆ. ಇಂತಹ ಚಿಂತನೆಗಳ ಕುರಿತು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

About the Author

ಭೈರಪ್ಪ ಕೆ.

ಸಾಹಿತಿ ಪ್ರೊ. ಕೆ. ಭೈರಪ್ಪನವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ವಿಠಲಾಪುರದವರು. ತಂದೆ ಕವನಯ್ಯ, ತಾಯಿ ಲಿಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಮಾಯಸಂದ್ರದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಸೃಜನಶೀಲ ಹಾಗೂ ಸೃಜನೇತರ ಎರಡೂ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕಲ್ಬತರು, ಸಿರಿಸಂಪಿಗೆ, ಕಲ್ಪಶ್ರೀ ಹಾಗೂ ನೇಗಿಲಯೋಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿದ್ದರು. ಪ್ರಮುಖ ಕೃತಿಗಳೆಂದರೆ ಮೇಡಂರತ್ನ, ದೇವಪುರೆ, ರಶ್ಮಿ, ಯಶಸ್ವಿನಿ, ಬೃಂದಾ (ಕಾದಂಬರಿ), ಮಕ್ಕಳ ಮನಸ್ಸು, ಬಾಲರ ಭಾವನೆ, ಕಿಶೋರರಕಿರಣ, ಮಕ್ಕಳ ಮಾಧುರ್ಯ, ಕಿರಿಯರ ಕಲರವ, (ಶಿಶುಗೀತೆ), ಏಳಿ ಯುವ ಜನರೆ ಎದ್ದೇಳಿ, ಭವಕಾಲ ...

READ MORE

Related Books