ನಮಾಮಿ ಗಂಗೆ

Author : ಕೆ.ಆರ್.‌ ಚಂದ್ರಶೇಖರ್‌

₹ 185.00




Year of Publication: 2021
Published by: ಮೈಲ್ಯಾಂಗ್ ಬುಕ್ಸ್
Address: ಕ್ಲಾಸಿಕ್ ಆರ್ಕಿಡ್ಸ್ , 253 ಬನ್ನೇರುಘಟ್ಟ ಮೈನ್ ರೋಡ್, ಬೆಂಗಳೂರು- 560076
Phone: 8296332054

Synopsys

ನೀರಿನ ಸಮಸ್ಯೆ ವಿಷಯಾಧಾರಿತ ಲೇಖನ ಕೃತಿ ʻನಮಾಮಿ ಗಂಗೆʼ. ಕೆ.ಆರ್.‌ ಚಂದ್ರಶೇಖರ್‌ ಅವರು ಕೃತಿಯ ಲೇಖಕ. ಬೆಂಗಳೂರಿನ ಕೊಳಚೆ ನೀರು, ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಮತ್ತು ದಿನನಿತ್ಯ ಬಳಸುವ ನೀರು, ಬಳಸಿದ ನಂತರ ಆ ನೀರು ಏನಾಗುತ್ತದೆ, ಅದರಿಂದಾಗಿ ಅನಾನುಕೂಲಗಳು, ಹರಡುವ ರೋಗಗಳು, ಎದುರಿಸಬೇಕಾದ ಸಮಸ್ಯೆಗಳು ಯಾವುವು ಎಂಬ ವಿಚಾರಗಳನ್ನು ಪ್ರಸ್ತುತ ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ. ಲೇಖಕರು ಸುಮಾರು ನಾಲ್ಕೈದು ವರ್ಷ ರಾಜರಾಜೇಶ್ವರಿ ನಗರ, ಬೈರಮಂಗಲ, ಬೆಳ್ಳಂದೂರು ಮೊದಲಾದ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಗಾಗಿ ಓಡಾಡುವಾಗ ಅಲ್ಲಿನ ನೀರಿನ ಸ್ಥಿತಿ-ಗತಿ ನೋಡಿ ಆ ಬಗ್ಗೆ ಜನರಿಗೆ ಮಾಹಿತಿ ಜೊತೆಗೆ ಎಚ್ಚರಿಕೆ ನೀಡುವ ಸಲುವಾಗ ಪುಸ್ತಕ ರೂಪದಲ್ಲಿ ತಂದಿದ್ದಾರೆ.

About the Author

ಕೆ.ಆರ್.‌ ಚಂದ್ರಶೇಖರ್‌

ಕೆ.ಆರ್.‌ ಚಂದ್ರಶೇಖರ್‌ ಅವರು ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ತಂತ್ರಜ್ಞರಾಗಿದ್ದು, ಪ್ರವೃತ್ತಿಯಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಲೇಖನ, ಪುಸ್ತಕ ವಿಮರ್ಶೆ ಇವರ ನೆಚ್ಚಿನ ಪ್ರಕಾರ. ಸುಮಾರು ನಾಲ್ಕೈದು ವರ್ಷ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಓಡಾಡುವಾಗ ಒಂದೊಂದು ಪ್ರದೇಶದ ನೀರಿನ ಸ್ಥಿತಿ-ಗತಿ ನೋಡಿ ಆ ಕುರಿತಾಗಿ ಬರೆದು ʻನಮಾಮಿ ಗಂಗೆʼ ಎಂಬ ಕೃತಿಯನ್ನೂ ಹೊರತಂದಿದ್ದಾರೆ. ಇದು ಚಂದ್ರಶೇಖರ್‌ ಅವರ ಮೊದಲ ಪ್ರಕಟಿತ ಪುಸ್ತಕ.  ಪ್ರಕಟಿತ ಪುಸ್ತಕ: ನಮಾಮಿ ಗಂಗೆ ...

READ MORE

Related Books