ರಾಮಜಾಧವ

Author : ರಾಮಕೃಷ್ಣ ಮರಾಠೆ

Pages 94

₹ 50.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ರಾಮ ಜಾಧವರವರು ಮೂಲತ ಮರಾಠಿಯವರಾದರೂ, ಮರಾಠಿ ಮನೆಯಲ್ಲಿ ಹುಟ್ಟಿದರೂ ಕನ್ನಡ ಓಣಿಯಲ್ಲಿ ಬೆಳೆದು ಏಕೀಕರಣದ ಗಾಳಿಯನ್ನು ಉಸಿರಾಗಿಸಿಕೊಂಡು ಕನ್ನಡವನ್ನೇ ತಮ್ಮ ಬದುಕಾಗಿಸಿಕೊಂಡವರು. ಕನ್ನಡ ಕಟ್ಟುವ ಕೆಲಸದಲ್ಲಿ ಅಪ್ಪಟ ‘ಕೂಲಿ’ಯಂತೆ ಕೆಲಸ ಮಾಡಿದವರೇ ರಾಮಜಾಧವ. ಇತಿಹಾಸಕ್ಕಿಂತ ಭೂಗೋಳದ ಬಗ್ಗೆ ಒಲವಿದ್ದ ಇವರು ಇದುವೇ ನಮ್ಮ ಮೈ, ಮನಸ್ಸು, ಚರ್ಮ, ಚಕ್ಷು, ಸರ್ವಸ್ವ ಎಂದು ಹೇಳುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಕಟ್ಟಿ ಗೋಕಾಕ್ ಚಳುವಳಿಯ ಪ್ರಮುಖ ರುವಾರಿಯಾದವರು. ಇವರ ಜೀವನ ಸಾಧನೆಯ ಕುರಿತು ಲೇಖಕ .ಯಲ್ಲಪ್ಪ ಬಿ. ಹಿಮ್ಮಡಿ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ರಾಮಕೃಷ್ಣ ಮರಾಠೆ
(25 May 1958)

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ.  ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...

READ MORE

Related Books