ಸಂಜೀವಿನಿ

Author : ಗಿರಿಜಾ ಎಸ್. ದೇಶಪಾಂಡೆ

Pages 140

₹ 115.00




Year of Publication: 2021
Published by: ಶ್ರೀ ದೇವೀ ಪಬ್ಲಿಕೇಶನ್
Address: # 28/ಎ, 13ನೇ ಮುಖ್ಯ ರಸ್ತೆ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು -560050

Synopsys

‘ಸಂಜೀವಿನಿ’ ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ಕೃತಿ. ನಾಡಿನ ವಿವಿಧ ಪತ್ರಿಕೆಗಳಲ್ಲಿ ತರಕಾರಿಗಳು, ಹಣ್ಣುಗಳು, ಔಷಧೀಯ ಸಸ್ಯಗಳ ಕುರಿತು ಲೇಖನಗಳನ್ನು ಬರೆದಿದ್ದು, ಅವುಗಳ ಸಂಗ್ರಹ ಕೃತಿ ಇದು. ಕೃತಿಯಲ್ಲಿ ಒಟ್ಟು 67 ಲೇಖನಗಳಿವೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಕೃತಿಯ ಕುರಿತು ‘ಈ ಕೃತಿಯು ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಸರಳ, ಸುಂದರ, ಉದ್ಬೋಧಕ ಕೃತಿಯಾಗಿದೆ. ಉತ್ತಮ ಅರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ನಿಯಮಗಳ ಜತೆ ಪ್ರತಿ ಹಣ್ಣು ತರಕಾರಿಗಳ ವೈಜ್ಞಾನಿಕ ಹೆಸರುಗಳು, ಅವುಗಳಲ್ಲಿರುವ ಪೌಷ್ಟಿಕಾಂಶಗಳು, ಅವುಗಳಿಂದ ಅರೋಗ್ಯಕ್ಕೆ ಆಗುವ ಪ್ರಯೋಜನಗಳು, ಬಳಸುವ ರೀತಿ ಮೊದಲಾದ ವಿಷಯಗಳ ಮೇಲೆ ನಿಖರ ಬೆಳಕು ಚೆಲ್ಲಿ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಈ ಕೃತಿಯಲ್ಲಿ ಆಯುರ್ವೇದ ಔಷಧಿಗಳ ಮಾಹಿತಿಗಳಿವೆ. ಅಡಿಗೆಮನೆಯ ಆಹಾರ ಸಾಮಗ್ರಿಗಳಲ್ಲಿರುವ ಆರೋಗ್ಯದ ಖಜಾನೆಯನ್ನೇ ತೆರೆದಿಟ್ಟಿದ್ದಾರೆ. ವರ್ಷಪೂರ್ತಿ ದೊರೆಯುವ ಬಾಳೆ ಹಣ್ಣು, ನಿರ್ದಿಷ್ಟ ಕಾಲದಲ್ಲಿ ದೊರೆಯುವ ಮಾವು, ನೇರಳೆ, ಪಪಾಯಿ, ಕಲ್ಲಂಗಡಿ, ಬೆಂಡೆಕಾಯಿ, ಗೋರೀಕಾಯಿ, ಬೀಟ್ ರೂಟ್, ಗಜ್ಜರಿ, ಧಾನ್ಯಗಳು, ಮನೆಯಲ್ಲಿ ಲಭ್ಯವಿರುವ ಹಾಲು, ಮೊಸರು, ಕಾಯಿ ಹಾಲು, ಎಳೆನೀರು ಮೊದಲಾದ ಹಲವಾರು ಸಸ್ಯಾಹಾರಗಳಿಂದ ಆಗುವ ಪ್ರಯೋಜನಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಓದುಗರ ಮುಂದಿಟ್ಟಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ ಬೇಕಾದ ಅಗತ್ಯಗಳನ್ನೇ ಒಳಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಕೃತಿಯಾಗಿದೆ. ನಿತ್ಯ ಮನೆಯ ಅಡಿಗೆ ಕೋಣೆಯ ನಾಗೊಂದಿಗೆ ಮೇಲೆ ಇಟ್ಟುಕೊಂಡು ಓದುವ ಕೃತಿ. ಹೆಚ್ಚಿನ ಖರ್ಚಿಲ್ಲದೇ ನಿತ್ಯ ಸಿಗುವ ಔಷಧೀಯ ಸಸ್ಯಗಳು, ನಿತ್ಯ ಬಳಸುವ ತರಕಾರಿ, ಹಣ್ಣು ಹಂಪಲ ಧಾನ್ಯಗಳಿಂದಲೇ ನಾವು ರೋಗಗಳನ್ನು ದೂರವಿಡಬಹುದೆಂಬ ನಿಚ್ಚಳ ಸಂದೇಶ ಈ ಗ್ರಂಥದಲ್ಲಿದೆ. ಅರೋಗ್ಯದ ಕುರಿತ ಸಮಗ್ರ ಮಾಹಿತಿಯ ಕೃತಿಯೂ ಹೌದು’ ಎಂದು ಪ್ರಶಂಸಿಸಿದ್ದಾರೆ.

About the Author

ಗಿರಿಜಾ ಎಸ್. ದೇಶಪಾಂಡೆ

ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು. ಹಾವೇರಿಯಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಬಿ.ಇಡಿ ಪದವೀಧರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರು. ಇವರು ಬರೆದ ಲೇಖನಗಳು, ಸಂದರ್ಶನಗಳು, ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಾಗಿದ್ದಾರೆ. ಕೃತಿಗಳು: . ಸಂವಾದಿನಿ (32 ಮಹಿಳಾ ಸಾಧಕರ ಪರಿಚಯ), ಸಂಜೀವಿನಿ (ಆರೋಗ್ಯ ಲೇಖನಗಳು), ಜೇನುಗೂಡು (ಆತ್ಮಕಥೆ) ಪ್ರಶಸ್ತಿ-ಪುರಸ್ಕಾರಗಳು: ಡಿ.ಎಸ್.ಮ್ಯಾಕ್ಸ್ ಕನಸ್ಟ್ರಕ್ಶನ್ (2019) ಕಂಪನಿಯವರಿಂದ ರಾಜ್ಯೋತ್ಸವದಂದು ಶ್ರೇಷ್ಟ ಅಂಕಣ ಬರಹಗಾರ್ತಿ ಸಾಹಿತ್ಯಶ್ರೀ ಪ್ರಶಸ್ತಿ, ಕನ್ನಡ ...

READ MORE

Related Books