ಸೂಫಿ ಸಂತರು

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 288

₹ 176.00




Year of Publication: 2010
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಖ್ಯಾತ ಲೇಖಕ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕೃತಿ-ಸೂಫಿ ಸಂತರು. ಒಟ್ಟು 25 ಸೂಫಿ ಸಂತರ ಬಗ್ಗೆ ಬರೆದ ಲೇಖನಗಳಿವೆ. ಭಾರತೀಯ ಜನಜೀವನದಲ್ಲಿ ಕೋಮು ಸಾಮರಸ್ಯದ ಬದುಕು ಹಾಸುಹೊಕ್ಕಾಗಿದೆ. ಅದನ್ನು ಹದಗೆಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಸಾಮರಸ್ಯದ ಬದುಕಿಗೆ ಧಕ್ಕೆ ಬಂದಿಲ್ಲ ಎಂಬುದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಇಲ್ಲಿ ಅನೇಕ ಧರ್ಮೀಯ ಜನರಿದ್ದಾರೆ. ಪ್ರತಿ ವ್ಯಕ್ತಿಯೂ ಎಷ್ಟು ಹಿಂದುವೋ ಅಷ್ಟೇ ಮುಸ್ಲಿಮೂ ಹೌದು. ಅದರ ಚಿಂತನೆ ಪ್ರಾರಂಭವಾಗುವುದೇ ಬೆರಗಿನಲ್ಲಿ. ಅದು ಪೂಜಿಸುವುದು, ಮೆಚ್ಚುವುದು, ಚಿಂತಿಸುವುದು ಬೆರೆಗಿನಲ್ಲಿ. ಅಸಾಮಾನ್ಯರೆನ್ನಿಸುವ ವಿಭೂತಿ ಪುರುಷರು ಹುಟ್ಟಿಸುವ ಬೆರೆಗನ್ನು ಈ ಮನಸ್ಸು ಹಿಡಿದಿಡುವುದು, ಕಾಪಾಡುವುದು, ನೆನಸಿಕೊಳ್ಳುವುದು ಬೆರಗಿನ ಪರಿಭಾಷೆಗಳನ್ನು ಪಡೆದ ಪವಾಡಗಳಲ್ಲಿ; ಅಲೌಕಿಕ ಘಟನೆಗಳಲ್ಲಿ. ಎಲ್ಲ ಪವಾಡಗಳೂ ಒಂದೇ ಬಗೆಯವು ಅಲ್ಲ. ಕೆಲವು ಮೌಢ್ಯವನ್ನು ಬೆಳೆಸಲೆಂದು ಕಟ್ಟಿಹೇಳುವಂಥವು; ಭಯ ಹುಟ್ಟಿಸಲೆಂದು ಕೆಲವು. ಆದರೆ ಸೂಫಿಸಂತರ ಪವಾಡಗಳೆಲ್ಲವೂ ಪ್ರೀತಿಯನ್ನು ಬೆಳೆಸುವಂಥವು; ಔದಾರ್ಯವನ್ನು ಸಾರುವಂಥವು. ಇಲ್ಲಿಯ ಭಾಷೆಯು ತುಂಬಾ ಕಾವ್ಯಾತ್ಮಕವಾಗಿದೆ.

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Related Books