About the Author

ಜಾನಪದ ಚಿಂತಕ ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿಯಾಗಿದ್ದಾರೆ. ಜನಪದ ಕಲೆ, ಸಾಹಿತ್ಯ ಮತ್ತು ವಿಶ್ಲೇಷಣೆಯಲ್ಲಿ ಜೀವಪರ ನಿಲುವನ್ನು ಉಳ್ಳ ಅವರು `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಲೆಕ್ಕದಲ್ಲಿ ಜಾನಪದ ತಿಳಿವಳಿಕೆ, ಜಾನಪದ ಗ್ರಹಿಕೆ, ಜನಪದ ಕಲಾ ಪ್ರವೇಶ, ಮಹಾ ಕಾವ್ಯ ಲೇಖನಗಳು, ಗೊರವರ ಸಂಸ್ಕೃತಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಚಕ್ಕೆರೆ ಶಿವಶಂಕರ್