ದೆವ್ವ ಜಾನಪದ

Author : ಚಕ್ಕೆರೆ ಶಿವಶಂಕರ್

Pages 136

₹ 100.00




Year of Publication: 2008
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಾನಪದ ಸಿರಿಭುವನ, ನಂ.1, ಕರ್ನಾಟಕ ಸರ್ಕಾರ ನೌಕರರ ವಸತಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್. ರಸ್ತೆ, ಬೆಂಗಳೂರು-560054

Synopsys

ಆದಿ ಮಾನವನ ಕಾಲದಿಂದಲೂ ಮನುಕುಲದ ಜೊತೆಜೊತೆಗೇ ಸೇರಿಕೊಂಡಿರುವ ದೆವ್ವದ ಕಲ್ಪನೆ ಮೌಖಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ವಿಶ್ಲೇಷಣೆಯ ಹಂತದಲ್ಲಿ ಮನುಷ್ಯನ ಬುದ್ಧಿಮತ್ತೆಯನ್ನು ಬಹಳವಾಗಿ ಕಾಡಿದೆ. ದೆವ್ವದ ಅಸ್ತಿತ್ವದ ಬಗ್ಗೆ ಖಚಿತವಾದ ನಿಲುವಿಗೆ ಬರಲಾರದಷ್ಟು ಸಮಸ್ಯೆ ಬಿಗಡಾಯಿಸಿದೆ. ಪ್ರಸ್ತುತ ಕೃತಿಯಲ್ಲಿ ಪ್ರಾಚೀನ ಕಾಲದಿಂದ ಪ್ರಚಲಿತವಾಗಿರುವ ದೆವ್ವದ ನಂಬಿಕೆಯನ್ನು ಕುರಿತಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಹಲವು ಅಂಶಗಳನ್ನು ಇಲ್ಲಿನ ಲೇಖನಗಳಲ್ಲಿ ಪರಿಚಯಿಸಲಾಗಿದೆ.

ದೆವ್ವ: ಒಂದು ಜನಪದ ನಂಬಿಕೆ, ದೆವ್ವ-ಪಿಶಾಚಿ, ದೇವರು ದೆವ್ವಗಿವ್ವ: ನಮ್ಮೂರ ಸುತ್ತಮುತ್ತ, ದೆವ್ವಸಂಬಂಧಿ ನಂಬುಗೆಗಳು, ದೆವ್ವ: ಜನರು ಕಂಡಂತೆ, ದೆವ್ವ ಸುತ್ತ ಮುತ್ತಲಿನ ಕತೆಗಳು, ದೆವ್ವ ಜಾನಪದದ ಬಗೆಗೆ, ಚನ್ನಾದೇವಿಯ ದೆವ್ವಗಳು: ಆಧುನಿಕ ಅಭಿವ್ಯಕ್ತಿ, ಮುಸ್ಲಿಂ ಜನಾಂಗದಲ್ಲಿ ದೆವ್ವ (ಸೈತಾನ)ದ ಕಲ್ಪನೆ, ದೆವ್ವ ನಮ್ಮದೆ ಒಂದು ವ್ಯಕ್ತಿತ್ವ, ಕಲೆಯ ಆರಾಧನೆ ಅಥವಾ ಪಿತೃಪೂಜೆ, ದೆವ್ವದ ಪುರಾಣ ಕುರಿತು ಮಾಹಿತಿ ಈ ಕೃತಿಯಲ್ಲಿದೆ. ಈ ಕೃತಿಯನ್ನು ಡಿ. ಲಿಂಗಯ್ಯ ಮತ್ತು ಡಾ. ಚಕ್ಕೆರೆ ಶಿವಶಂಕರ್‌ ಸಂಪಾದಿಸಿದ್ದಾರೆ.

About the Author

ಚಕ್ಕೆರೆ ಶಿವಶಂಕರ್

ಜಾನಪದ ಚಿಂತಕ ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿಯಾಗಿದ್ದಾರೆ. ಜನಪದ ಕಲೆ, ಸಾಹಿತ್ಯ ಮತ್ತು ವಿಶ್ಲೇಷಣೆಯಲ್ಲಿ ಜೀವಪರ ನಿಲುವನ್ನು ಉಳ್ಳ ಅವರು `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಲೆಕ್ಕದಲ್ಲಿ ಜಾನಪದ ತಿಳಿವಳಿಕೆ, ಜಾನಪದ ಗ್ರಹಿಕೆ, ಜನಪದ ಕಲಾ ಪ್ರವೇಶ, ಮಹಾ ಕಾವ್ಯ ಲೇಖನಗಳು, ಗೊರವರ ಸಂಸ್ಕೃತಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books