ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

Author : ಚಕ್ಕೆರೆ ಶಿವಶಂಕರ್

Pages 240

₹ 50.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ನಿಜಗುಣ ಶಿವಯೋಗಿಗಳ ಪರಂಪರೆಯಲ್ಲಿ ಬೆಳೆದುಬಂದ ತತ್ವಪದಕಾರರಾದ ಕೆಸ್ತೂರದೇವ (1700), ಹಾಗಲವಾಡಿ ಮುದ್ವೀರಸ್ವಾಮಿ (1700-1738) ಮತ್ತು ಸೋಮೇಕಟ್ಟೆ ಚನ್ನವೀರಸ್ವಾಮಿಯವರ ತತ್ವಪದಗಳನ್ನು ಈ ಸಂಪುಟ ಒಳಗೊಂಡಿದೆ. 

ತೋಂಟದ ಸಿದ್ಧಲಿಂಗ ಯತಿಗಳ ಸಂಪ್ರದಾಯಕ್ಕೆ ಸೇರಿದ ಕೆಸ್ತೂರದೇವರ ವೈಯಕ್ತಿಕ ವಿವರ ಲಭ್ಯವಿಲ್ಲ. ಗುರುಸಿದ್ಧಲಿಂಗ’ ಎಂಬುದು ಅವರ ಅಂಕಿತನಾಮ,

ತುಮಕೂರು ಜಿಲ್ಲೆಯ ಹಾಗಲವಾಡಿ ಸಂಸ್ಥಾನದ ಪಾಳೆಯಗಾರರ ಧರ್ಮಗುರುಗಳಾಗಿದ್ದ ಮುದ್ವೀರಸ್ವಾಮಿ ಅವರು ರಚಿಸಿದ ’ಶಿವತತ್ವ ಸುಜ್ಞಾನ ದೀಪಿಕೆ’ ಮತ್ತು 107 ಪದಗಳು ಲಭ್ಯವಿವೆ. ಇವರೂ ಸಹ ತೋಂಟದ ಸಿದ್ದಲಿಂಗ ಯತಿಗಳ ಶಿಷ್ಯ ಪರಂಪರೆಗೆ ಸೇರಿದವರು.

ಸೋಮೇಕಟ್ಟೆ ಚೆನ್ನವೀರಸ್ವಾಮಿಗಳೂ ಸಹ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆಮಠ ಪರಂಪರೆಗೆ ಸೇರಿದವರು. ವಿರಾಗಿಯಾಗಿದ್ದ ಅವರ ಅಂಕಿತನಾಮ ಗುರುಚನ್ನಬಸವ. ಅವರು24 ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿದು ಬರುತ್ತದೆ. ಚನ್ನವೀರಸ್ವಾಮಿಗಳ ಕುರಿತ ಹೆಚ್ಚಿನ ವಿವರಗಳು ಲಭ್ಯವಿಲ್ಲ.

About the Author

ಚಕ್ಕೆರೆ ಶಿವಶಂಕರ್

ಜಾನಪದ ಚಿಂತಕ ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿಯಾಗಿದ್ದಾರೆ. ಜನಪದ ಕಲೆ, ಸಾಹಿತ್ಯ ಮತ್ತು ವಿಶ್ಲೇಷಣೆಯಲ್ಲಿ ಜೀವಪರ ನಿಲುವನ್ನು ಉಳ್ಳ ಅವರು `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಲೆಕ್ಕದಲ್ಲಿ ಜಾನಪದ ತಿಳಿವಳಿಕೆ, ಜಾನಪದ ಗ್ರಹಿಕೆ, ಜನಪದ ಕಲಾ ಪ್ರವೇಶ, ಮಹಾ ಕಾವ್ಯ ಲೇಖನಗಳು, ಗೊರವರ ಸಂಸ್ಕೃತಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books