About the Author

ದ್ವಾರನಕುಂಟೆ ಪಾತಣ್ಣ ಅವರು 1951 ಮಾರ್ಚ್ 14 ರಂದು  ತುಮಕೂರು ಜಿಲ್ಲೆಯ ದ್ವಾರನಕುಂಟೆಯಲ್ಲಿ ಜನಿಸಿದರು. ಬಿ.ಎಸ್. ಸಿ, ಡಿ.ಎಂ.ಇ ಪದವೀಧರರಾದ ಇವರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. 18 ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ಧಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ  ಪ್ರಶಸ್ತಿ, ವಿಶ್ವೇಶರಯ್ಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ದ್ವಾರನಕುಂಟೆ ಪಾತಣ್ಣ