ರಣಕಹಳೆ (ಮಕ್ಕಳ ಕಾದಂಬರಿ)

Author : ದ್ವಾರನಕುಂಟೆ ಪಾತಣ್ಣ

Pages 88

₹ 70.00




Year of Publication: 2018
Published by: ಸ್ನೇಹ ಪ್ರಕಾಶನ
Address: #133, 1ನೇ ಅಡ್ಡರಸ್ತೆ, ಜ್ಞಾನಜ್ಯೋತಿನಗರ, ಬಾಲಾಜಿ ಬಡಾವಣೆ, ಮಲ್ಲತ್ತಹಳ್ಳಿ, ಬೆಂಗಳೂರು-560056

Synopsys

ಲೇಖಕ ದ್ವಾರನಕುಂಟೆ ಪಾತಣ್ಣ ಅವರು ಬರೆದ ಮಕ್ಕಳ ಕಾದಂಬರಿ-ರಣಕಹಳೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಅದರಲ್ಲೂ , ಮಕ್ಕಳ ಕಾದಂಬರಿ ಬರೆಯುವವರ ಸಂಖ್ಯೆ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ, ದ್ವಾರನಕುಂಟೆ ಪಾತಣ್ಣನವರ ಮಕ್ಕಳ ಸಾಹಿತ್ಯ ರಚನೆ ಕಳಕಳಿ ಗಮನ ಸೆಳೆಯುತ್ತದೆ. ಮಕ್ಕಳ ಕಲ್ಪನಾಲೋಕ ವಿಸ್ತರಿಸುವ ಸರಳ ಭಾಷೆ, ಸರಳ ತಂತ್ರಗಳು, ಸನ್ನಿವೇಶಗಳ ಜೋಡಣೆಯಲ್ಲಿಯ ಸರಳತನ, ಪಾತ್ರ ಸೃಷ್ಟಿಯಲ್ಲಿನ ಸೃಜನಶೀಲತೆ ಎಲ್ಲವೂ ಕಾದಂಬರಿಯ ಆಕರ್ಷಣೆಯಾಗಿವೆ.

About the Author

ದ್ವಾರನಕುಂಟೆ ಪಾತಣ್ಣ

ದ್ವಾರನಕುಂಟೆ ಪಾತಣ್ಣ ಅವರು 1951 ಮಾರ್ಚ್ 14 ರಂದು  ತುಮಕೂರು ಜಿಲ್ಲೆಯ ದ್ವಾರನಕುಂಟೆಯಲ್ಲಿ ಜನಿಸಿದರು. ಬಿ.ಎಸ್. ಸಿ, ಡಿ.ಎಂ.ಇ ಪದವೀಧರರಾದ ಇವರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. 18 ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ಧಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ  ಪ್ರಶಸ್ತಿ, ...

READ MORE

Related Books