About the Author

ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962  ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್‌ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಶಾಂತಿಗಾಗಿ ನಾಗರಿಕ ವೇದಿಕೆಯ ಸಕ್ರಿಯ ಕಾರ್ಯಕರ್ತೆಯರಾಗಿದ್ದರು. ಅವರು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ರಾಜೇಶ್ವರಿ ನಗರದಲ್ಲಿರುವ ತಮ್ಮ  ಮನೆಯ ಹೊರಗೆ ಅಜ್ಞಾತ ಆಕ್ರಮಣಕಾರರ ಗುಂಡೇಟಿಗೆ ಬಲಿಯಾದರು. 

ಗೌರಿ ಲಂಕೇಶ್

(29 Jan 1962-05 Sep 2017)

ABOUT THE AUTHOR