About the Author

ಬರಹಗಾರರು, ಉಪನ್ಯಾಸಕರು ಆಗಿರುವ ಡಾ. ನಾಗೇಂದ್ರ ಅವರು ಪ್ರಸ್ತುತ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಸಿನಿಮಾ, ಮಾಧ್ಯ ನಿರೂಪಕರ ಧ್ವನಿ, ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು, ಮಾಧ್ಯಮ ವರದಿಗಾರಿಕೆ, ಟಿ.ವಿ ವರದಿಗಾರಿಕೆ, ಮಾಧ್ಯಮ ಲೋಕ, ದೈನಿಕ ವರದಿಗಾರಿಕೆ, ಟಿವಿ ಮಾಧ್ಯಮ, ದೃಶ್ಯ ನಿರ್ಮಾಣ, ರೇಡಿಯೋ ಧ್ವನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲಿಷ್ ಭಾಷೆ ಪುಸ್ತಕ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರು   ಹಿಸ್ಟರಿ ಆಫ್ ರೇಡಿಯೋ ಅಂಡ್ ಪ್ರೋಗ್ರಾಂ ಪ್ರೊಡಕ್ಷನ್, ಎಮರ್ಜಿಂಗ್ ಟ್ರೆಂಡ್ ಇನ್ ಮೈಕ್ರೋ ಫೈನಾನ್ಸ್ ಅಂಡ್ ಸಸ್ಟೈನಬಲ್ ಸೋಷಿಯಲ್ ಡೆವೆಲಪ್ ಮೆಂಟ್, ವಿಮೆನ್ ವೆಲ್‍ನೆಸ್ ಅಂಡ್ ಎಂಪವರ್ ಮೆಂಟ್ ಇನ್ ಟ್ವೆಂಟಿಫಸ್ರ್ಟ್ ಸೆಂಚುರಿ: ರೋಲ್ ಆಫ್ ಸೋಷಿಯಲ್ ವರ್ಕ್ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

ನಾಗೇಂದ್ರ