About the Author

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ.

ಪ. ಮಾನು ಸಗರ

(02 Aug 1950)