ಸಗರನಾಡ ಸಂಪದ

Author : ಪ. ಮಾನು ಸಗರ

Pages 264

₹ 125.00




Year of Publication: 2009
Published by: ಮಹಾಕವಿ ಲಕ್ಷ್ಮೀಶ ಪ್ರಕಾಶನ
Address: ಕನ್ನಡ ಸಾಹಿತ್ಯ ಸಂಘ, ಸುರಪುರ, ಜಿ: ಯಾದಗಿರಿ-585224
Phone: 9448214003

Synopsys

ಅವಿಭಜಿತ ಕಲಬುರಗಿ ಜಿಲ್ಲೆಯ ಶಹಾಪುರ, ಜೇವರ್ಗಿ ಹಾಗೂ ಸುರಪುರ ತಾಲೂಕು ವ್ಯಾಪ್ತಿಯ ಪ್ರದೇಶವು ’ಸಗರನಾಡು’ ಎಂದೇ ಪ್ರಸಿದ್ಧಿ. ಈ ಪ್ರದೇಶದ ಪ್ರದೇಶದ ಪ್ರಾಚೀನ ಕವಿಗಳ ಒಂದೊಂದು ಕವನವನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳುತ್ತಾ, ಹಳೆಗನ್ನಡ, ನವ್ಯ, ನವೋದಯ ಎಂಬ ಗೊಡವೆಗೆ ಹೋಗದೇ, ಒಂದೇ ಸರಣಿಯಲ್ಲಿ ಈಗಿನ ಹಿರಿಯ-ಕಿರಿಯ ಕವಿಗಳ ಕವನಗಳನ್ನೂ ಪೋಣಿಸಿ, ಸಗರನಾಡಿನ ಬೃಹತ್ ಕಾವ್ಯ ಮಾಲೆಯಾಗಿಸಿದ್ದೇ ’ಸಗರನಾಡ ಸಂಪದ’. ಪ. ಮಾನು ಸಗರ ಅವರು ಕವನಗಳ ಈ ಕೃತಿಯನ್ನು ಸಂಪಾದಿಸಿದ್ದು, ಸಗರನಾಡಿನ ಕಾವ್ಯ ಪರಂಪರೆಯ ನಿರಂತರತೆಯನ್ನು ಈ ಕೃತಿಯು ಪ್ರತಿನಿಧಿಸುತ್ತದೆ.

About the Author

ಪ. ಮಾನು ಸಗರ
(02 August 1950)

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ...

READ MORE

Related Books