About the Author

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿರುವ ಆರ್‌.ಡಿ. ಹೆಗಡೆ ಅವರು ಜನಿಸಿದ್ದು  1964ರ ಡಿಸೆಂಬರ್‌ 3ರಂದು. ಶಿರಸಿ, ಉತ್ತರ ಕನ್ನಡ  ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ. ಅವರು ಭಾರತದಲ್ಲಿ ಶಿಕ್ಷಣ ಸಾಧ್ಯತೆ ಮತ್ತು ಸವಾಲು ಎಂಬ ಪುಸ್ತಕ್ಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿಗಳು: ಭಾಸನಾಟಕಗಳ ಕಥೆ (ಸಂಸ್ಕೃತದಲ್ಲಿ), ವಾಲ್ಮಿಕಿರಾಮಾಯಣದ ಸುಭಾಷಿತಗಳು (ಸಂಗ್ರಹ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ಮೂರು ಬಾರಿ ಮುದ್ರಿತ),  ಉಪನಿಷತ್ತುಗಳ ಅರ್ಥಲೋಕ(ಮೂರು ಬಾರಿ ಮುದ್ರಿತ),  ಪುಟ್ಟ ಗುಲಾಬಿ ಹೂವೇ, (ಕಥಾಸಂಕಲನ), ದಾರಿ(ಕಿರು ಕಾದಂಬರಿ), ಭಾರತದಲ್ಲಿ ಉನ್ನತ ಶಿಕ್ಷಣ:ಸವಾಲು ಮತ್ತು ಸಾಧ್ಯತೆ(ಅನುವಾದ),   ಮಾನವತ್ವದ ಸಾರ(ಅನುವಾದ),  ಕೃತಿಚಿತ್ತ, ಸಂಕಥನ, ಜೆನ್‌ಮಹಾಯಾನ,  ಕವಿ ವಿ ಜಿ ಭಟ್ಟರ ಸಾಹಿತ್ಯ ಪರಾಮರ್ಶೆ,  ಪೂರ್ಣಚಂದ್ರ ತೇಜಸ್ವಿ:ಬದುಕು-ಬರಹ , ಕಡಲಾಚೆಯ ಕಥೆಗಳು ,ತುಂಬಿದ ಬಟ್ಟಲು ಮತ್ತು ಇತರ ಬರಹಗಳು.

ಆರ್.ಡಿ. ಹೆಗಡೆ