About the Author

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನ ಹಳ್ಳಿಯವರಾದ ಆರ್. ವಿಜಯರಾಘವನ್ (1956) ಅವರು ಕವಿ. 5 ಕವನ ಸಂಕಲನ, 2 ಕತಾ ಸಂಕಲನ, 3 ಕಾದಂಬರಿ ಮತ್ತು ಹಲವು ಬಿಡಿ ಪ್ರಬಂಧಗಳಿಂದ ಚಿರಪರಿಚಿತರಾಗಿರುವಷ್ಟೇ, ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದು ಪ್ರಸಿದ್ದರು.

ಅವರು ಈಗಾಗಲೇ 23 ಕೃತಿಗಳನ್ನು ಅವರು ಪ್ರಕಟಿಸಿದ್ದು, ಮ್ಯೂಸ್ ಇಂಡಿಯಾ, ಅವಧಿ, ಕೆಂಡ ಸಂಪಿಗೆ, ಸಂಪದ, ಸಂವಾದ ಮುಂತಾದ ಇ-ಮ್ಯಾಗಝಿನ್‌ಗಳಲ್ಲಿ ಮತ್ತು ಬೆಂಗಳೂರು ಆಕಾಶವಾಣಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವವರು. ಪೂಚಂತೇ ಅವರ ಅಳಿಯ ನಿರ್ಮಿಸಿಕೊಟ್ಟಿರುವ ಕುವೆಂಪು ಡಾಟ್ ಕಾಂನ ಸಾಹಿತ್ಯವನ್ನು ಪೂರ್ಣವಾಗಿ ಇಂಗ್ಲಿಷ್‌ಗೆ ಅನುವಾದಿಸಿಕೊಡುತ್ತಿರುವ ಅವರು ಖ್ಯಾತ ವಿದ್ವಾಂಸ ಪ್ರೊ. ಎಲ್. ಬಸವರಾಜು ಅವರಿಗಾಗಿ ಅಲ್ಲಮನ ಬೆಡಗಿನ 100 ವಚನಗಳನ್ನು ‘ಪೊಸೆಸ್‌ಡ್ ಬೈ ಅಲ್ಲಮ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಅವರ ಈಚೆಗಿನ ‘ನೋಟ ಮತ್ತು ಲಲ್ಲಾದೇವಿ’ ಎಂಬ ಕವನ ಸಂಕಲನ ವಿಮರ್ಶಕರ ವಿಶೇಷ ಗಮನ ಸೆಳೆದಿದ್ದು, ಮುದ್ದಣ ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ ಕವನ ಸಂಗ್ರಹ ‘ಅನುಸಂಧಾನ’ ಅವರ ಪ್ರತಿಭೆಯ ಬಯಲನ್ನು ಬಯಲಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. 

‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ. ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕರೂ ಆಗಿರುವ ವಿಜಯರಾಘವನ್ ಅವರ ‘ಪ್ರೀತಿ ಬೇಡುವ ಮಾತು’ (ಕಾದಂಬರಿ) ಸೇರಿದಂತೆ ಹಲವು ಪ್ರಕಟಿತ ಕೃತಿಗಳಿವೆ.

ಪ್ರಶಸ್ತಿಗಳು: ಮುದ್ದಣ ಕಾವ್ಯ ಪ್ರಶಸ್ತಿ (2012), ಮಾಸ್ತಿ ಪ್ರಶಸ್ತಿ (2021)

ಆರ್.ವಿಜಯರಾಘವನ್

Stories/Poems