About the Author

ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರು. ಸದ್ಯ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯ ಕಥೆ , ಪ್ರಬಂಧ ಮತ್ತು ಕ್ರೀಡಾ ಬರಹದಲ್ಲಿ ಆಸಕ್ತಿ. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಕ್ರೀಡಾ ಕಾರ್ಯಕ್ರಮಗಳ ನಿರ್ವಹಣೆ. ಸ್ಥಳೀಯ ಪತ್ರಿಕೆಗಳಲ್ಲಿ ಕ್ರೀಡಾ ಅಂಕಣಗಳನ್ನೂ ಬರೆದಿದ್ದಾರೆ. ಇವರ ಸಣ್ಣ ಕತೆಗಳು, ಪ್ರಬಂಧಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ ಹಾಗೂ ವಿಜಯ ಕರ್ನಾಟಕ, ಪಂಜು ಆನ್ಲೈನ್ ಪತ್ರಿಕೆ, ಸಂಗಾತ ಮತ್ತು ಕುಂದಾಪುರದ ಸ್ಥಳೀಯ ಪತ್ರಿಕೆಗಳ ವಿಶೇಷಾಂಕದಲ್ಲಿ ಪ್ರಕಟವಾಗಿವೆ. ಕೆನರಾ ಟೈಮ್ಸ್ ದಿನ ಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ,  ಕುಂದಾಪುರ ದಲ್ಲಿ (2000) `ಚಿಗುರು' ಮಾಸ ಪತ್ರಿಕೆ ಆರಂಭಿಸಿ ಕೆಲ ಕಾಲ (ಹವ್ಯಾಸಿ ) ಉಪಸಂಪಾದಕರಾಗಿದ್ದರು.

ಕೃತಿಗಳು: ಅಜ್ಜ ನೆಟ್ಟ ಹಲಸಿನ ಮರ - ಇವರ ಮೊದಲ ಕಥಾ ಸಂಕಲನ. 

ಸತೀಶ್ ಶೆಟ್ಟಿ ವಕ್ವಾಡಿ

BY THE AUTHOR