About the Author

ವೃತ್ತಿಯಿಂದ ಪಶುವೈದ್ಯರಾದ ಡಾ. ಟಿ.ಎಸ್‌. ರಮಾನಂದ ಅವರು ಪ್ರವೃತ್ತಿಯಿಂದ ಲೇಖಕರು. ತಮ್ಮ ವೈದ್ಯಕೀಯ ಅನುಭವವನ್ನು ಸೊಗಸಾದ ರೀತಿಯಲ್ಲಿ ಅಕ್ಷರಕ್ಕೆ ಇಳಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತರಾದರು. ಸದ್ಯ ಶಿವಮೊಗ್ಗ ನಿವಾಸಿ.
'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ'  ಇವು ಮೂರು ಪ್ರಕಟಿತ ಕೃತಿಗಳು. ವೃತ್ತಿಯ ಅನುಭವವನ್ನು ತಮ್ಮ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿದ್ದಾರೆ. ಪಶುವೈದ್ಯರ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ.

ಟಿ.ಎಸ್. ರಮಾನಂದ