ಬೌದ್ಧ ಧರ್ಮದ ರಾಜನೀತಿ

Author : ಎಸ್. ನಟರಾಜ ಬೂದಾಳು

Pages 51

₹ 54.00




Year of Publication: 2022
Published by: ಪಲ್ಲವ ಪ್ರಕಾಶನ

Synopsys

ಕನ್ನಡದ ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾದ ನಟರಾಜ ಬೂದಾಳು ಅವರು ಬೌದ್ಧ ಚಿಂತನೆಗಳ ಅಧ್ಯಯನದಲ್ಲಿ ಹೆಸರು ಮಾಡಿದವರು. ಈ ನಿಟ್ಟಿನಲ್ಲಿ ಹಲವಾರು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಆ ಸಾಲಿಗೆ ಸೇರುವ ಮತ್ತೊಂದು ಕೃತಿ ’ಬೌದ್ಧ ಧರ್ಮದ ರಾಜನೀತಿ. ಇದು ಕವಿ ನಾಗಾರ್ಜುನನ ರಾಜಪರಿಕಥಾ ರತ್ನಾವಳಿ ಕೃತಿಯ ಸಂಗ್ರಹಾನುವಾದ. ಬೌದ್ಧತತ್ವದ ನಿಜವಾದ ವ್ಯಾಖ್ಯಾನವನ್ನು ಕಟ್ಟಿಕೊಟ್ಟವನಾದ ನಾಗರ್ಜುನ ಅತಿ ಮಹತ್ವದ ತತ್ವಜ್ಞಾನಿಗಳಲ್ಲಿ ಒಬ್ಬ. ಬುದ್ಧನ ನಿರ್ವಾಣವಾಗಿ ಆರುನೂರು ವರ್ಷಗಳ ಬಳಿಕ ಆತನ ಚಿಂತನೆಗಳ ವ್ಯಾಖ್ಯಾನಕ್ಕೆ ನಿಂತ ನಾಗಾರ್ಜುನ, ಆವರೆಗಿನ ತಪ್ಪು ತಿಳುವಳಿಕೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಈ ನಿಟ್ಟಿನಲ್ಲಿನ ಒಂದು ಮಹತ್ವದ ಕೃತಿಯಾಗಿರುವ ರಾಜಪರಿಕಥಾ ರತ್ನಾವಳಿಯನ್ನು ಬೂದಾಳು ಅವರು ಕನ್ನಡದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books