ಚಾಣಕ್ಯ ನೀತಿ ಸೂತ್ರಗಳು

Author : ಕೆ.ಎಸ್‍. ನಾರಾಯಣಾಚಾರ್ಯ

Pages 208

₹ 160.00




Published by: ಸಾಹಿತ್ಯ ಪ್ರಕಾಶನ,
Address: ಸಾಹಿತ್ಯ ಪ್ರಕಾಶನ ಕೊಪ್ಪಿಕರ್‍ ರಸ್ತೆ, ಹುಬ್ಬಳ್ಳಿ 9448110031

Synopsys

ಚಾಣಕ್ಯ ಭಾರತ ಕಂಡ ಅಪ್ರತಿಮ ನೀತಿಜ್ಞ ದಾರ್ಶನಿಕ. ಅರ್ಥ ಶಾಸ್ತ್ರವಾಗಲಿ, ರಾಜ್ಯ ಶಾಸ್ತ್ರವಾಗಲಿ ಎಲ್ಲದರಲ್ಲೂ ಚಾಣಕ್ಯನ ನೀತಿಗಳು ಪ್ರಮುಖ ಸ್ಥಾನವನ್ನು ಪಡೆದಿವೆ. ಈಗಲೂ ಕೂಡ ಚಾಣಕ್ಯನಂತೆ ಅವನು ಬರೆದಿಟ್ಟ ನೀತಿ ಶಾಸ್ತ್ರದ ಅಂಶಗಳು ಕೂಡ ಬಹು ಚರ್ಚಿತ ವಿಷಯಗಳು. ಇವತ್ತಿಗೂ ರಾಜಕಾರಣದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಗಹನವಾದ ಆಲೋಚನೆ ನಡೆಸಿ ಸಮಗ್ರ ಕಾರ್ಯ ತಂತ್ರ ನಡೆಸಿ ವಿಜಯಿಯಾಗುವ ವ್ಯಕ್ತಿಗಳನ್ನು ಚಾಣಕ್ಯ ಎಂದು ಕರೆಯುತ್ತಾರೆ. ಇಂತಹ ಮಹಾನ್‍ ವ್ಯಕ್ತಿಯ ಕುರಿತು ಈಗಾಗಲೇ ಹಲವು ಪುಸ್ತಕಗಳು ಕನ್ನಡಲ್ಲಿ ಹಾಗೂ ಇತರ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಅಂತಹುದೇ ಸಾಲಿನಲ್ಲಿ ಕಾಣ ಸಿಗುವ ಇನ್ನೊಂದು ಪುಸ್ತಕ ಚಾಣಕ್ಯನ ನೀತಿ ಸೂತ್ರಗಳು – ಇಂದಿನ ಪ್ರಸ್ತುತತೆ. ಇಂದಿಗೂ ಚಾಣಕ್ಯ ನಮ್ಮ ಬದುಕಿನ ಒಂದು ಭಾಗವಾಗಿಯೇ ಮಾರ್ಪಾಡಾಗಿದ್ದಾನೆ. ಪಟ್ಟದ ಮಂತ್ರಿಯಾಗುವ ಅವಕಾಶವಿದ್ದರೂ, ಅದನ್ನು ನಿರಾಕರಿಸಿ ಅಧ್ಯಾಪಕನಾಗಿಯೇ ಜೀವನ ಕಳೆದ ಚಾಣಕ್ಯನ ಜೀವನವೇ ಒಂದು ದಂತ ಕಥೆ. ಅಂತಹ ವ್ಯಕ್ತಿಯ ಕುರಿತಾದ ಮತ್ತು ಅವನು ಬರೆದಂತಹ ನೀತಿಶಾಸ್ತ್ರದ ಬೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವುದು ಕಷ್ಟದ ಮಾತು. ಅಂತಹ ಒಂದು ಸವಾಲನ್ನು ಲೇಖಕರು ಈ ಪುಸ್ತಕದಲ್ಲಿ ಮೆಟ್ಟಿ ನಿಂತಿದ್ದಾರೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books