ತುಮಕೂರು ಜಿಲ್ಲಾ ಜಾತ್ರೆಗಳು

Author : ಯಣ್ಣೆಕಟ್ಟೆ ಚಿಕ್ಕಣ್ಣ

Pages 144

₹ 40.00




Year of Publication: 2003
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಜಾನಪದದ ಬದಕಿನಲ್ಲಿ ಜಾತ್ರೆಯು ಆಸಕ್ತಿ ಹುಟ್ಟಿಸೂದರೊಂದಿಗೆ , ಜಾತ್ರೆಯು ಜಾನಪದರ ಜೀವನದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ,ಇದರ ಮಹತ್ವ ಏನು? ಎಂಬ ಹಲವು ವಿಷಯಗಳನ್ನು’ಡಾ. ಯಣ್ಣೆಕಟ್ಟೆ ಚಿಕ್ಕಣ್ಣ’ ರವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ತುಮಕೂರು ಜಿಲ್ಲೆಯ ತಾಲೂಕುಗಳನ್ನು ಆಧಾರವಾಗಿಟ್ಟುಕೊಂಡು , ಅಲ್ಲಿನ ಪ್ರತಿಯೊಂದು ತಾಲೂಕಿಗೂ ಭೇಟಿಕೊಟ್ಟು ಅಲ್ಲಿ ನಡೆಯುವ ಜಾತ್ರೆಯ ಬಗ್ಗೆ ವಿವರವನ್ನು ಪಡೆದುಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಅಲ್ಲಿಯ ಭೌಗೋಳಿಕ ಪರಿಸ್ಥಿತಿ, ಪ್ರಧಾನ ದೇವತೆಗಳ ಬಗ್ಗೆ, ಗುಡಿ,ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಘನತೆಯನ್ನು ಸಾರುತ್ತದೆ. ಜಾತ್ರೆಯ ಮಹತ್ವ,ಅದರ ಹಿನ್ನೆಲೆ ಬಗ್ಗೆ ವಿವರಗಳನ್ನು ಲೇಖಕರು ಒದಗಿಸಿದ್ದಾರೆ.

About the Author

ಯಣ್ಣೆಕಟ್ಟೆ ಚಿಕ್ಕಣ್ಣ

ಡಾ. ಯಣ್ಣೆಕಟ್ಟೆ ಚಿಕ್ಕಣ್ಣ ಜಾನಪದ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಪ್ರಸ್ತುತ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಬುಡಕಟ್ಟು ಸಂಸ್ಕೃತಿ ಅಧ್ಯಯನಕ್ಕೆ ಇವರ ಕೊಡುಗೆ ಅನನ್ಯವಾದುದು. - ವೀರಜುಂಜಪ್ಪ ಸಮಗ್ರ ಕಥಾವಳಿ, ಚಿತ್ರದೇವರ ಕಾವ್ಯ ಈ ಮೊದಲಾದ ಮಹತ್ವದ ಬುಡಕಟ್ಟು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಗಡಿನಾಡ ಜಾನಪದ, ತುರುಗೋಳ್ ಜಾನಪದ, ಜಾನಪದ ಸಂಪನ್ನರು, ತುಮಕೂರು ಜಿಲ್ಲೆ ಜಾನಪದೀಯ ನೆಲೆಗಳು ಇವರ ಪ್ರಮುಖ ಸಂಶೋಧನಾ ಕೃತಿಗಳು. 'ಹಿಮ ತಬ್ಬಿದ ನೇಪಾಳ ಕೃತಿಯೂ ಸೇರಿದಂತೆ 'ಬಂಡಿ ...

READ MORE

Related Books