ಡಜನ್ನಿಗೆ ಹದಿಮೂರು

Author : ಎಂ.ಎಸ್.ಎಸ್. ಮೂರ್ತಿ

₹ 240.00




Year of Publication: 2020
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560 085
Phone: 9739561334

Synopsys

‘ಡಜನ್ನಿಗೆ ಹದಿಮೂರು’ ಕೃತಿಯು ಎಂ.ಎಸ್.ಎಸ್. ಮೂರ್ತಿ ಅವರ ವಿವಿಧ ದೇಶಗಳ ಅನುವಾದಿತ ಜನಪದ ಕತೆಗಳಾಗಿವೆ. ಇಂಗ್ಲೆಡ್, ಕೊರಿಯಾ, ಸ್ಕಾಟ್ಲೆಂಡ್, ಚೀನಾ, ರಷ್ಯಾ, ಐರ್ಲೆಂಡ್, ಸರ್ಬಿಯಾ ಮುಂತಾದ 22 ದೇಶಗಳ 36 ಜಾನಪದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕೃತಿಗೆ ಬೆನ್ನುಡಿ ಬರೆದಿರುವ ಕ್ಯಾತನಹಳ್ಳಿ ರಾಮಣ್ಣ ಅವರು, ಯಾವುದೇ ದೇಶದ ಯಾವ ಭಾಷೆಯ ಕೃತಿಯಾದರೂ ನಮಗೆ ಗೊತ್ತಿರುವ ಭಾಷೆಯ ಮೂಲಕವೇ ನಮ್ಮ ಮಾತೃಭಾಷೆಗೆ ತಂದುಕೊಳ್ಳಬೇಕಾಗುತ್ತದೆ. ಇದೊಂದು ಜಾಗತಿಕ ಸತ್ಯವಾಗಿದೆ. ಈ ಸತ್ಯವು ಮೂರ್ತಿ ಅವರ ಪ್ರಸ್ತುತ ಸಂಕಲನಕ್ಕೂ ಅನ್ವಯಿಸುತ್ತದೆ. ಭಾಷಾಂತರದ ಹಲವು ಮಜಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಾಗ ಮಾತ್ರ ಅನುವಾದ ಸಾಹಿತ್ಯ ಕೂಡಾ ಪರಿಣಾಮಕಾರಿಯಾಗುತ್ತದೆ. ಅಂಥ ಒಂದು ಪರಿಣಾಮಕಾರಿ ಫಲಿತಾಂಶವನ್ನು ಈ ಸಂಕಲನದಲ್ಲಿ ಕಾಣಬಹುದು. ಒಬ್ಬ ವಿಜ್ಞಾನಿಯಾಗಿ, ವಿಜ್ಞಾನ ಲೇಖಕರಾಗಿ, ಪ್ರಸಿದ್ದರಾಗಿರುವ ಎಂ.ಎಸ್.ಎಸ್.ಮೂರ್ತಿ ಅವರು ತಮ್ಮ ಬಿಡುವಿನ ವೇಳೆಗಳಲ್ಲಿ ಮನಸ್ಸನ್ನು ಹಗುರಗೊಳಿಸಿಕೊಳ್ಳಲೋ ಏನೋ ಓದುತ್ತಿದ್ದ ಬೇರೆ ಬೇರೆ ದೇಶಗಳ ಜನಪದ ಕತೆಗಳಿಂದ ಆಕರ್ಷಿತರಾಗಿ ಅವನ್ನು ಆಗಾಗ ಕನ್ನಡಕ್ಕೆ ಅನುವಾದಿಸುತ್ತಾ ಬಂದುದರ ಫಲವೇ ಈ ಸಂಕಲನವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎಂ.ಎಸ್.ಎಸ್. ಮೂರ್ತಿ
(16 August 1929 - 18 December 2012)

ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ  40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್‍ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ.  ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...

READ MORE

Conversation

Related Books